ಚಿಕ್ಕ ಮಕ್ಕಳ ಸಾವನ್ನು ಅವರ ಕುಟುಂಬಗಳು ಆರಗಿಸಿಕೊಳ್ಳಲಾಗಲ್ಲ ಡಿಕೆ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕ ಮಕ್ಕಳ ಸಾವನ್ನು ಅವರ ಕುಟುಂಬಗಳು ಆರಗಿಸಿಕೊಳ್ಳಲಾಗಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

- Advertisement - 

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಕಾಲ್ತುಳಿತದ ದುರ್ಘಟನೆಯಲ್ಲಿ ಸತ್ತವರ ನೆನೆದು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದರು.

- Advertisement - 

ನಾಡಿನ ಜನರೆಲ್ಲ ಅವರಿಗಾಗಿ ದುಃಖಿಸುತ್ತಿದ್ದಾರೆ ಎಂದು ಗದ್ಗದಿತ ಧ್ವನಿಯಲ್ಲಿ ಅವರು ಹೇಳಿದರು. ಆರ್​ಸಿಬಿ ತಂಡದ ಮ್ಯಾನೇಜ್ಮೆಂಟ್ ಬೆಂಗಳೂರಿಗೆ ಬರುತ್ತಿರುವ ವಿಷಯವನ್ನು ತಿಳಿಸಿದ್ದರು.

ಹಾಗಾಗಿ ಸರ್ಕಾರಕ್ಕೆ ಬೇರೆ ಆಪ್ಷನ್ ಇರಲಿಲ್ಲ. ಸನ್ಮಾನ ಮಾಡಲೇಬೇಕಿತ್ತು. ಯಾರನ್ನೂ ದೂಷಿಸುವ ಪ್ರಯತ್ನ ತಾನು ಮಾಡುತ್ತಿಲ್ಲ. ಈ ದುರ್ಘಟನೆಯಿಂದ ಪಾಠ ಕಲಿಯಬೇಕಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.

- Advertisement - 

Share This Article
error: Content is protected !!
";