ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅಲೆಮಾರಿ ಕಲಾವಿದರ ಗುರುತಿಸಿದ ಜಿಲ್ಲಾಡಳಿತ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿಂದುಳಿದ ಅಲೆಮಾರಿ ಸಮುದಾಯದ ಕಲಾವಿದರಾದ ಹಗಲುವೇಷ ಜಾನಪದ ಕಲಾವಿದರನ್ನು ಗುರುತಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ ಜಿಲ್ಲಾಡಳಿತಕ್ಕೆ ಅಲೆಮಾರಿ ಸಮುದಾಯಗಳ ಮುಖಂಡರು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

- Advertisement - 

ಹಲವು ದಶಕಗಳ ಕಾಲ ಹಗಲು ವೇಷ ಹಾಕಿ ಜೀವನ ಮಾಡಿದ್ದೇವೆ. ಆದರೆ ಯಾವುದೇ ಜಿಲ್ಲಾಧಿಕಾರಿಗಳು, ಸರ್ಕಾರ ನಮ್ಮ ಸೇವೆ ಗುರುತಿಸಿರಲಿಲ್ಲ.

- Advertisement - 

ನವೆಂಬರ್-1 ರಂದು ಹಗಲು ವೇಷದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ಅತ್ಯಂತ ಖುಷಿಯ ವಿಷಯ ಎಂದು ಹಿರಿಯೂರು ಹೊರ ವಲಯದ ಕೆ ಎಂ ಕೊಟ್ಟಿಗೆ, ಡಿಸಿ ಕಾಲೋನಿ ನಿವಾಸಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

 

- Advertisement - 

Share This Article
error: Content is protected !!
";