ಒಡೆದು ಆಳುವ ಕಾಂಗ್ರೆಸ್‌” ಪಕ್ಷದ ಅತಿಯಾದ ಓಲೈಕೆ ರಾಜಕಾರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಡೆದು ಆಳುವ ಕಾಂಗ್ರೆಸ್‌” ಪಕ್ಷದ ಅತಿಯಾದ ಓಲೈಕೆ ರಾಜಕಾರಣ! ಎಲ್ಲಿಗೆ ಮುಟ್ಟಿದೆ ಎಂದರೇ, ಸಂವಿಧಾನವನ್ನೇ ಬದಲಾವಣೆ ಮಾಡುವ ಮಟ್ಟಿಗೆ ತಲುಪಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

ಒಂದು ಸಮುದಾಯದ ವೋಟಿಗಾಗಿ ಡಿಸಿಎಂ ಡಿ ಕೆ ಶಿವಕುಮಾರ್, ಸಂವಿಧಾನ ಬದಲಾಯಿಸುತ್ತಾರಂತೆ. ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದರೂ, ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್‌! ಎಂದು ಜೆಡಿಎಸ್ ಕಿಡಿ ಕಾರಿದೆ.

ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ನಾಟಕ, ಅಧಿಕಾರ ಹಿಡಿದಾಗ ಸಂವಿಧಾನ ಬದಲಿಸುವ ಮಾತು! ಇದು “ಗೋಸುಂಬೆ ಕಾಂಗ್ರೆಸ್‌” ನಿಜಬಣ್ಣ. ಎಷ್ಟಾದರೂ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಪಳೆಯುಳಿಕೆ ಪಕ್ಷ ಅಲ್ಲವೇ. ಎಂದು ಜೆಡಿಎಸ್ ತಿರುಗೇಟು ನೀಡಿದೆ.

 

Share This Article
error: Content is protected !!
";