ಮಾಧ್ಯಮಗಳು ವಸ್ತುಸ್ಥಿತಿಯನ್ನು ಜನರ ಮುಂದೆ ಇಡಬೇಕೇ ವಿನಃ, ಸತ್ಯವನ್ನು ಮರೆಮಾಚುವ ಕೆಲಸ ಮಾಡಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ 2025, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳು ದೀನ, ದಮನಿತರ ದನಿಯಾಗಿ ಕೆಲಸ ಮಾಡಬೇಕು. ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನ್ಯಾಯ, ಸಮಾನತೆ ಎತ್ತಿಹಿಡಿದಿದ್ದರು. ಮಾಧ್ಯಮಗಳು ಸಹಿತ ಮೌಲ್ಯಗಳನ್ನು ಉಳಿಸಿ ಜನಪರ ದನಿಯಾಗಬೇಕು ಎಂದರು.
ನಮಗೆ ಈ ಕ್ಷಣ ಅಗತ್ಯವಿರುವುದು ಜಾತಿ ರಹಿತ, ಮಾನವೀಯ ಮೌಲ್ಯಗಳುಳ್ಳ ಸಮಾಜ. ಆದರೂ ಕೆಲವರು ದ್ವೇಷ, ಅಸಹನೆಯಿಂದ ಸಮಾಜದ ಸ್ವಾಸ್ಥ್ಯವನ್ನು ನಾಶಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಯಾವುದೇ ಆಸ್ಪದ ನೀಡಬಾರದು. ಇತ್ತೀಚೆಗೆ ಸುಳ್ಳು ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗ ಎನಿಸಿರುವ ಪತ್ರಿಕಾರಂಗಕ್ಕೆ ಬಹಳಷ್ಟು ಜವಾಬ್ದಾರಿಗಳಿವೆ.
ಮ್ಯಾಗ್ಸಸೆ ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತರಾದ ಪಿ. ಸಾಯಿನಾಥ್ ಮಾತನಾಡಿ, 40 ವರ್ಷಗಳ ಹಿಂದೆ ಚಾಲ್ತಿಯಿದ್ದ ಪತ್ರಿಕೋದ್ಯಮ ಈಗಿಲ್ಲ. ಈಗ ಕಾಪೆರ್Çೀರೇಟ್ ವಲಯದೊಳಗೆ ಪತ್ರಿಕಾರಂಗ ತೆರೆದುಕೊಳ್ಳುತ್ತಿದೆ. ಮಾರ್ಚ್ 31, 2021ಕ್ಕೆ ದೇಶದ ಮಾಧ್ಯಮಗಳು ಒಟ್ಟು 2.51 ಟ್ರಿಲಿಯನ್ ಬಂಡವಾಳ ಹೊಂದಿದೆ. ಕೆಲವೇ ವ್ಯಕ್ತಿಗಳಲ್ಲಿ ದೇಶದ 70 ಮೀಡಿಯಾಗಳು ವಶವಾಗಿದೆ. 4 ನೇ ದೊಡ್ಡ ಆರ್ಥಿಕತೆ ಹೊಂದಿರುವ ನಮ್ಮ ರಾಷ್ಟ್ರದಲ್ಲಿನ 211 ಬಿಲಿಯನೇರ್ಗಳಿಂದ ಶೇ.25ರಷ್ಟು ಜಿಡಿಪಿ ಉತ್ಪತ್ತಿಯಾಗುತ್ತಿದೆ. ಮಾಧ್ಯಮಗಳೂ ಆರ್ಥಿಕವಾಗಿ, ಸಬಲಗೊಂಡರೂ ಸುದ್ದಿಯ ಪ್ರಸಾರ ಹಾಗೂ ಗುಣಮಟ್ಟ ಕಡಿಮೆಯಾಗುತ್ತಿದೆ.
ಹಿರಿಯ ಸಾಹಿತಿಗಳು ಹಾಗೂ ಸಂಸ್ಕøತಿ ಚಿಂತಕರಾದ ರಹಮತ್ ತರೀಕೆರೆ ಮಾತನಾಡಿ ಸುದ್ದಿಯನ್ನು ನೋಡುವ ದೃಷ್ಟಿಕೋನ, ವ್ಯಾಖ್ಯಾನದಲ್ಲಿ ಹಲವು ವ್ಯತ್ಯಾಸಗಳಿರುತ್ತದೆ. ನಿಜ ಸುದ್ದಿಯನ್ನು ವ್ಯಾಖ್ಯಾನಿಸಿದಾಗ ಅದರಲ್ಲಿ ಹತ್ತು ಹಲವು ಪದರಗಳು ತೆರೆದುಕೊಳ್ಳುತ್ತದೆ. ಕಳೆದ 20 ವರ್ಷಗಳಿಗೆ ಹೋಲಿಸಿದರೆ ಮಾಧ್ಯಮಗಳು ಮಲಿನಗೊಂಡಿದೆ.
ಕನ್ನಡ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೇμÁ ಖಾನಂ ಮಾತನಾಡಿ, ಇಂದು ಪತ್ರಿಕಾ ದಿನಾಚರಣೆಯ ಹುಟ್ಟು ಹಬ್ಬ. ಕನ್ನಡ ಪತ್ರಿಕೋದ್ಯಮದ ಇತಿಹಾಸಕ್ಕೆ 182 ವರ್ಷಗಳು ಸಂದಿವೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್ 1843ರ ಜುಲೈ 1 ರಿಂದ ಮಂಗಳೂರಿನಲ್ಲಿ ಬಾಸೆಲ್ ಮಿಷನ್ ಅವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು. ಜರ್ಮನ್ ಮತ ಪ್ರಚಾರಕರಾದ ಮೋಗ್ಲಿಂಗ್ ಅವರು ಕನ್ನಡ ಕಲಿತು ಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಆಸಕ್ತಿ ಹೊಂದಿ ನಾಲ್ಕು ಪುಟಗಳನ್ನೊಳಗೊಂಡ ಮಂಗಳೂರು ಸಮಾಚಾರ್ ಪತ್ರಿಕೆಯನ್ನು ಪ್ರಕಟಿಸಿದರು. ವರ್ತಮಾನಗಳು, ವಾಚಕರ ವಾಣಿಗಳು, ಅಂಕಣಗಳನ್ನು, ಸಾಹಿತ್ಯಗಳನ್ನು ಕುರಿತು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು ಎಂದು ಪತ್ರಿಕೋದ್ಯಮದ ಹಿನ್ನಲೆಯನ್ನು ತಿಳಿಸಿದರು.

ಮುಂಬೈ, ಕಾಸರಗೋಡು, ಚತ್ತೀಸ್ಘಡ್, ದುಬೈ, ಅಮೆರಿಕಾದಲ್ಲಿ ಕನ್ನಡಿಗರು ಇರುವ ಜಾಗದಲ್ಲಿ ಕನ್ನಡ ಭಾμÉ ಬೆಳೆದಿದೆ. ಸುಳ್ಳು ಸುದ್ದಿ ಪ್ರಸಾರ ಕುರಿತಂತೆ ಮಾಧ್ಯಮ ಅಕಾಡೆಮಿ ವತಿಯಿಂದ ಸೆಮಿನಾರ್ ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಲೋಕಾರ್ಪಣೆಗೊಳಿಸಿ, ಫಲಾನುಭವಿಗಳಿಗೆ ಬಸ್ ಪಾಸ್ ವಿತರಿಸಿದರು. ಇದರಿಂದ 5500 ಕ್ಕೂ ಹೆಚ್ಚು ಗ್ರಾಮೀಣ ಪತ್ರಕರ್ತರು ಪ್ರಯೋಜನೆ ಪಡೆಯಲಿದ್ದು, 16 ಕೋಟಿ ವೆಚ್ವವಾಗಲಿದೆ. ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿಯಡಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ರಾಜ್ಯದ 2500 ಪತ್ರಕರ್ತರು ಸೇರ್ಪಡೆಯಾಗಿದ್ದು, ಪ್ರತಿ ವರ್ಷ ಇದಕ್ಕೆ 3.60 ಕೋಟಿ ವೆಚ್ಚವಾಗುತ್ತಿದ್ದು, ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ 6.79 ಕೋಟಿ ಠೇವಣಿ ಇರಿಸಲಾಗಿದೆ. ಅಲ್ಲದೆ ಫಲಾನುಭವಿಗಳಿಗೆ ಮಾಧ್ಯಮ ಅಕಾಡೆಮಿಯಂದ ಎಸ್ ಸಿ ಪಿ/ ಟಿಎಸ್ ಪಿ ಯೋಜನೆÀಯಡಿ ಮೋಜೋ ಕಿಟ್ ಸಹ ವಿತರಿಸಲಾಯಿತು.