ನೀನೆಂಬ ಜೀವಂತಿಕೆ… ಕಿರುಚಿತ್ರದ ಚಿತ್ರೀಕರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೇಖಕ ಅಶ್ವತ್ಥ್ ಕಲ್ಲೇದೇವರಹಳ್ಳಿ ಅವರು ಇಂಜಿನಿಯರಿಂಗ್ ಕಾಲೇಜಿನ ವೃತ್ತಿಯಲ್ಲಿ ಎಷ್ಟೇ ಬ್ಯುಸಿ ಇದ್ದರು ಅವರ ಒಲವು ಮಾತ್ರ ಸಾಹಿತ್ಯದ ಕಡೆ. ಸದಾ ಚಟುವಟಿಕೆಯ ವ್ಯಕ್ತಿತ್ವ ರೂಢಿಸಿಕೊಂಡ ಇವರು ತಮ್ಮ ನೈಜ ಬರವಣಿಗೆಯ ಮೂಲಕ ಕಥೆ
, ಕವಿತೆ, ಅಂಕಣ  ಇನ್ನಿತರ ಸಾಹಿತ್ಯದ ವಿವಿದ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಈವರೆಗೆ ಇವರ 6 ಪುಸ್ತಕಗಳು ಪ್ರಕಟವಾಗಿವೆ.

- Advertisement - 

ಇವರು 2021ರಲ್ಲಿ ಗ್ರಾಮೀಣ ಸೊಗಡಿನ ಮಹಿಳಾ ಪ್ರಧಾನ ಕಿರುಚಿತ್ರ “ಬಳಪಿನಗುತ್ತಿ” ನಿರ್ದೇಶಿಸಿದ್ದರು. ಮತ್ತೆ ಇದೀಗ ಕೌಟುಂಬಿಕ ಕಥಾವಸ್ತುವನ್ನೊಳಗೊಂಡ, “ನೀನೆಂಬ ಜೀವಂತಿಕೆ” ಎಂಬ ಕಿರುಚಿತ್ರದ ಮೂಲಕ ಮತ್ತೊಮ್ಮೆ ಆಕ್ಷನ್ ಕಟ್ ಹೇಳಲು ತಯಾರಿ ನಡೆಸಿದ್ದಾರೆ.

- Advertisement - 

ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಧಿಕ್ಕರಿಸದೇ ಅನನ್ಯ ಪ್ರೀತಿಯನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉದ್ಭವಿಸುವ ಪರಿಸ್ಥಿತಿಗಳನ್ನು ಇಲ್ಲಿನ ಪಾತ್ರಗಳು ಹೇಗೆ ನಿಭಾಯಿಸಬಲ್ಲವು ಅನ್ನುವುದನ್ನು ಈ ಕಿರುಚಿತ್ರ ಹೇಳುತ್ತದೆ ಎನ್ನುತ್ತಾರೆ ನಿರ್ದೇಶಕ ಅಶ್ವತ್ಥ್.

ಈ ಕಿರುಚಿತ್ರದ ನಿರ್ಮಾಣವನ್ನು “ಟೀಂ ಅಕ್ಸ” ಮಾಡುತ್ತಿದ್ದು, ನಾಯಕರಾಗಿ ಮನೋಜ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ ಹಾಗೂ ನಾಯಕಿಯಾಗಿ ರಂಗಾಯಣದ ಕು. ವನಿತಾ ಜೊತೆಯಾಗಿದ್ದಾರೆ ಮತ್ತು ಛಾಯಾಗ್ರಹಣ ನರಸಿಂಹ ಸಿ ಅವರದು. ಈ ಚಿತ್ರದ ಚಿತ್ರೀಕರಣವನ್ನು ಜೂನ್ ಎರಡನೇವಾರದಲ್ಲಿ

- Advertisement - 

ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನೆಡೆಸುವುದಾಗಿ ಚಿತ್ರತಂಡ ಹೇಳಿದೆ. ವಿಜಯಲಕ್ಷ್ಮಿ ಮಂಡ್ಯ, ಸುನೀಲ್ ರತ್ನಾಕರ್, ವಿನಾಯಕ ಭಜಂತ್ರಿ, ಹೆಚ್ ವೆಂಕಟೇಶ್, ಪುಟ್ಟರಾಜು ಮತ್ತು ನಂದಿನಿ ತಂಡದ ಜೊತೆಗಿದ್ದಾರೆ. ಈ ಕಿರುಚಿತ್ರ  ಯಶಸ್ವಿಯಾಗಲೆಂದು ನಮ್ಮ ಪತ್ರಿಕೆಯು ಟೀಂ ಅಕ್ಸ ಚಿತ್ರತಂಡಕ್ಕೆ ಶುಭ ಹಾರೈಸುತ್ತದೆ.

 

 

Share This Article
error: Content is protected !!
";