ಕಾಂಗ್ರೆಸ್ ಭವನ ನಿರ್ಮಿಸಲು ನಾಗರಿಕ ಸೌಲಭ್ಯದ ನಿವೇಶನ ಬಳಕೆ ಖಂಡನೀಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಗುರುವಾರ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಹಲವೆಡೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾದ ನಿವೇಶನಗಳ ಮಂಜೂರಾತಿಗೆ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ

ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಿವೇಶನ ಅಥವಾ ಮನೆ ನೀಡಲು ಒಂದೇ ಒಂದು ಯೋಜನೆ ರೂಪಿಸಲಾಗದ ಈ ಸರ್ಕಾರ ತನ್ನ ಪಕ್ಷದ ಕಚೇರಿಗಾಗಿ ಸ್ವಂತ ಕಟ್ಟಡ ಹೊಂದಲು ನಿವೇಶನ ಮಂಜೂರು ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ನಿರ್ಧಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ. 

- Advertisement - 

ಕರ್ನಾಟಕದ ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಹೈಕಮಾಂಡ್ ನ ATam ಆಗಿ ಬಳಕೆಯಾಗುತ್ತಿದೆ, ಅದರ ಒಂದು ಭಾಗದಷ್ಟನ್ನಾದರೂ ಉಳಿಸಿ ತನ್ನ ಸ್ವಂತ ಖರ್ಚಿನಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಮಾರುಕಟ್ಟೆ ಬೆಲೆಯಲ್ಲಿ ಕೊಳ್ಳುವ ಶಕ್ತಿ ಇದ್ದರೂ ಸಾರ್ವಜನಿಕರ ಕಲ್ಯಾಣ ಕಾರ್ಯಕ್ಕೆ ಮೀಸಲಿರುವ ನಿವೇಶನಗಳನ್ನು ಪಕ್ಷದ ಕಚೇರಿಗಾಗಿ ಕಬಳಿಸುತ್ತಿರುವ ಪರಿ ಅತ್ಯಂತ ವಿಪರ್ಯಾಸ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

 

- Advertisement - 

 

 

Share This Article
error: Content is protected !!
";