ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿ ವಿಲಾಸ ಸಾಗರಕ್ಕೆ ಮಳೆಯಿಂದಾಗಿ ನಿರೀಕ್ಷೆಗೂ ಮೀರಿದ ನೀರಿನ ಒಳ ಹರಿವು ಬರುತ್ತಿದೆ.
ಅಕ್ಟೋಬರ್-26ರಂದು ಭಾನುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 1230 ಕ್ಯೂಸೆಕ್ ಗೆ ನೀರಿನ ಒಳ ಹರಿವು ಇದೆ. 133.30 ಅಡಿಗೆ ಏರಿಕೆಯಾಗಿದೆ. ಅಲ್ಲದೆ ಕೋಡಿ ಮೂಲಕ 9814 ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ.
ನೀರಿನ ಒಳ ಹರಿವಿಗಿಂತ ಹೆಚ್ಚಿನ ನೀರನ್ನು ಗೇಟ್ ಒಪನ್ ಮಾಡಿ ಹಳ್ಳಕ್ಕೆ ಹರಿಸುತ್ತಿರುವುದರಿಂದ ವಿವಿ ಸಾಗರದ ನೀರು ಪೋಲಾಗಿ ಹರಿಯುತ್ತಿದೆ. ಅಲ್ಲದೆ ಕಾಲುವೆಗಳ ಮೂಲಕ ನೀರು ಹರಿಸಿದರೆ ರೈತರು ಅಚ್ಚುಕಟ್ಟು ಪ್ರದೇಶಗಳಿಗೆ ಹರಿಸಿಕೊಳ್ಳಲಿದ್ದಾರೆ.
ರೈತರಿಗೂ ನೀರು ಬೇಡವಾದರೆ ಆ ಎಲ್ಲ ನೀರು ವೇದಾವತಿ ನದಿ ಸೇರಲಿದೆ. ಹಾಗಾಗಿ ಪೋಲಾಗಿ ಹರಿಯುವ ನೀರನ್ನ ಎಡ ಮತ್ತು ಬಲ ಕಾಲುವೆಗಳಿಗೆ ಹರಿಸಬೇಕಾಗಿದೆ.
ಇನ್ನೂ ಹೆಚ್ಚಿನ ನೀರು ಹರಿಸಬೇಕೆಂದರೆ ಕುಂದಲಗುರು ತೊಟ್ಟಿ ಮೂಲಕ ವಿವಿಧ ಬ್ಯಾರೇಜ್, ಚೆಕ್ ಡ್ಯಾಂ, ಕೆರೆ ಕಟ್ಟೆಗಳಿಗೆ ನೀರು ಭರ್ತಿ ಮಾಡಲಿ ಎಂದು ರೈತ ಮುಖಂಡ ಪಿಟ್ಲಾಲಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.

