ವಿಶೇಷ ಚೇತನ ಮಕ್ಕಳ ಪೋಷಣೆ: ಆರೈಕೆದಾರರ ಕೆಲಸ ಶ್ಲಾಘನೀಯ-ವೈಶಾಲಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶೇಷ ಚೇತನ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಾ, ಲಾಲನೆಫೋಷಣೆ ಮಾಡುವ ಪೋಷಕರ (ಆರೈಕೆದಾರರ) ಕೆಲಸವು ಶ್ಲಾಘನೀಯವಾದುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಹೇಳಿದರು.

  ನಗರದ ಬಿಆರ್ಸಿ ಸಭಾಂಗಣದಲ್ಲಿ ಗುರುವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಾಬಿಲಿಟಿ ಹಾಗೂ ತಾಲ್ಲೂಕು ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೈಕೆದಾರರು ಮತ್ತು ವಿಶೇಷ ಚೇತನ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ವಿತರಿಸಿ ಅವರು ಮಾತನಾಡಿದರು.

    ವಿಕಲಚೇತನ ಮಕ್ಕಳು, ಪೋಷಕರಿಗೆ ಪೌಷ್ಠಿಕಾಂಶ ಆಹಾರ ಹಾಗೂ ಉದ್ದೇಶದ ಬಗ್ಗೆ ತಿಳಿಸಿ, ವಿಶೇಷ ಚೇತನ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಾ, ಲಾಲನೆ ಪೋಷಣೆ ಮಾಡುವ ಪೋಷಕರ (ಆರೈಕೆದಾರರ) ಕೆಲಸವು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 100 ಮಂದಿ ವಿಶೇಷ ಚೇತನ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನಂದಿನಿ, ಬಿಆರ್ಟಿ ಟೀಚರ್ ರಾಜೀವ್ ಹಾಗೂ ಎಂಆರ್ಡಬ್ಲ್ಯೂ ಮೈಲಾರಪ್ಪ, ಎಪಿಸಿ ಸಂಸ್ಥೆಯ ವೇದಮೂರ್ತಿ, ಚಿದನಂದ್ ಹಾಜರಿದ್ದರು.

 

 

Share This Article
error: Content is protected !!
";