ಪಿಸ್ತೂಲ್​​​​​​ ತೋರಿಸಿ ಚಿನ್ನಾಭರಣ, ನಗದು ಕದ್ದ ಕಳ್ಳರು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿನ್ನಾಭರಣ ಅಂಗಡಿಗೆ ಚಿನ್ನ ಖರೀದಿ ನೆಪದಲ್ಲಿ ಬಂದು, ಪಿಸ್ತೂಲ್​​​​​​ ತೋರಿಸಿ 30 ಗ್ರಾಂ ಚಿನ್ನಾಭರಣ ಹಾಗೂ 50 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್​​​ ಠಾಣಾ ವ್ಯಾಪ್ತಿಯ ದಾಸನಪುರದ ರಾಮದೇವ್​​​​ ಜ್ಯುವೆಲ್ಲರಿ ಶಾಪ್​ನಲ್ಲಿ ನಡೆದಿದೆ. ಎರಡು ಬೈಕ್​ ಗಳಲ್ಲಿ ಮೂವರು ಆರೋಪಿಗಳು ಮಂಗಳವಾರ ಸಂಜೆ 5:30ರ ಸುಮಾರಿಗೆ ಬಂದಿದ್ದಾರೆ. ಮೊದಲು ಇಬ್ಬರು ಜ್ಯುವೆಲ್ಲರಿ ಶಾಪ್‌ನೊಳಗೆ ಪ್ರವೇಶಿಸಿದ್ದಾರೆ.

ಇನ್ನೋರ್ವ ಹೊರಗಿದ್ದ. ಶಾಪ್​ಗೆ ಬಂದವರು ಕಿವಿ ಓಲೆ ತೋರಿಸಿ, ಇಂಥದ್ದೇ ಡಿಸೈನ್​ ಬೇಕು ಎಂದೆಲ್ಲಾ ಹೇಳಿದ್ದಾರೆ. ಜ್ಯುವೆಲ್ಲರಿ ಶಾಪ್​ ಮಾಲೀಕರ ಮಕ್ಕಳಾದ ವಿಷ್ಣು ಮತ್ತು ಗೌತಮ್ ಅಂಥ ಡಿಸೈನ್ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಈ ವೇಳೆ ಒಬ್ಬ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ. ತಕ್ಷಣ ಹೊರಗಿದ್ದ ಆರೋಪಿ ಬಂದು ಚಿನ್ನಾಭರಣ ಮತ್ತು ನಗದು ಹಣವನ್ನು ಬ್ಯಾಗ್​ನಲ್ಲಿ ತುಂಬಿಸಿಕೊಂಡಿದ್ದಾರೆ.

- Advertisement - 

ಇದರಿಂದ ಆತಂಕಗೊಂಡು ಮಕ್ಕಳು ಕಿರುಚಿಕೊಂಡಿದ್ದಾರೆ. ಓರ್ವ ಆರೋಪಿ ಬಾಲಕನ ಮುಖ, ಕೈಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಮಹಿಳೆಯರ ಗುಂಪು ಶಾಪ್​ನತ್ತ ಬರುವುದನ್ನು ಗಮನಿಸಿದ ಆರೋಪಿಗಳು ಬೈಕ್​ನಲ್ಲಿ ಪರಾರಿಯಾಗಿದ್ದಾರೆ.

ಮಾಲೀಕರಾದ ಮಾಣಿಕ್ ರಾಮ್ ಅವರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಉತ್ತರ ಪಶ್ಚಿಮ ವಿಭಾಗದ ಡಿಸಿಪಿ ಡಿ.ಎಲ್.ನಾಗೇಶ್ ಪ್ರತಿಕ್ರಿಯಿಸಿ​​
, ಆರೋಪಿಗಳು ಬಳಸಿರುವ ಪಿಸ್ತೂಲ್​ ನಿಜವಾದುದೋ ಅಥವಾ ನಕಲಿಯೋ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದ್ದು ಆದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

- Advertisement - 

 

 

Share This Article
error: Content is protected !!
";