ತುರುವನೂರು ಆಂಜನೇಯಸ್ವಾಮಿ ರೇಖಾ ಚಿತ್ರ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ದಾಖಲೆ: ಸಿಎಂ ಸೇರಿ ಗಣ್ಯರ ಅಭಿನಂದನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದರ್ಗ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಗ್ರಾಮದ ಪೊಲೀಸ್ ಠಾಣೆಯ ಪಕ್ಕದ ಸುಮಾರು ೫ ಎಕರೆ ಜಮೀನಿನಲ್ಲಿ ಬೆಂಗಳೂರಿನ ಶ್ರೀಸಾಯಿ ಕ್ಯಾಡ್ ಸಂಸ್ಥೆ ಶ್ರೀಆಂಜನೇಯಸ್ವಾಮಿಯ ರೇಖಾಚಿತ್ರವನ್ನು ರಚಿಸಿದ್ದು ಸದರಿ ರೇಖಾಚಿತ್ರ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದು ಸಾಯಿ ಕ್ಯಾಡ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ
, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಶಾಸಕ ಟಿ.ರಘುಮೂರ್ತಿಯವರನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀಸಾಯಿಕ್ಯಾಡ್ ಸಂಸ್ಥೆ ತುರುವನೂರಿನ ಐದು ಎಕರೆ ಪ್ರದೇಶದಲ್ಲಿ ಆಂಜನೇಯಸ್ವಾಮಿಯ ರೇಖಾ ಚಿತ್ರವನ್ನುಬಿಡಿಸಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದೀರಿ, ಗ್ರಾಮೀಣ ಭಾಗದಲ್ಲಿ ಇಂತಹ ಸಾಧನೆಗಳನ್ನು ಗುರುತಿಸುವುದು ಅಪರೂಪವಾದ ಕಾಲದಲ್ಲಿ ಸಂಸ್ಥೆ ಮಾಡಿರುವ ಕಾರ್ಯ ಶ್ಲಾಘನೀಯವೆಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶಾಸಕ ರಘುಮೂರ್ತಿ ಕ್ಷೇತ್ರದಲ್ಲಿ ಇಂತಹ ಮಹಾನ್ ಸಾಧನೆ ಮಾಡಿದ ಸಾಯಿಕ್ಯಾಡ್ ಸಂಸ್ಥೆ ಕಾರ್ಯದಿಂದ ರಾಜ್ಯಕ್ಕೂ ಜಿಲ್ಲೆಗೂ ಕೀರ್ತಿ ತಂದಿದ್ದೀರಿರೆಂದು ಅಭಿನಂದಿಸಿದರು.

 ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ತುರುವನೂರಿನ ರೇಖಾ ಚಿತ್ರ ಸಾಯಿಕ್ಯಾಡ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥರೆಡ್ಡಿ, ಪತ್ನಿ ಪ್ರತಿಮಾ ರೆಡ್ಡಿ ಹಾಗೂ ತಂಡ ಈ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಮೂಲಕ ನೂತನ ದಾಖಲೆ ನಿರೂಪಿಸಿದ್ದಾರೆ.

ನಿಮ್ಮ ಸಾಧನೆ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗಿರುವುದು ಸಂತಸ ತಂದಿದೆ. ನಿಮ್ಮ ಕಾರ್ಯಕ್ಕೆ ಉತ್ತಮ ಪ್ರತಿಫಲ ದೊರಕಿದೆ. ನಿಮ್ಮ ಕಾರ್ಯದಿಂದ ನಮ್ಮ ಕ್ಷೇತ್ರಕ್ಕೂ ಹಾಗೂ ಜಿಲ್ಲೆಗೂ ಉತ್ತಮ ಗೌರವ ವ್ಯಕ್ತವಾಗಿದೆ ಎಂದರು.

 

Share This Article
error: Content is protected !!
";