ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ನಾಗರಿಕ ಸಮಾಜದಲ್ಲಿ ಸಂಬಂಧಗಳ ವಿಶ್ವಾಸ ಗಟ್ಟಿಯಾಗಿ ನಿಲ್ಲಬೇಕಿದೆ ಎಂದರೆ ಕೆಲವೊಂದು ಸನ್ನಿವೇಶಗಳ ಘಟನೆಗಳನ್ನು ನೋಡಿಯೂ ನೋಡದಂತೆ ಇರಬೇಕು.
ಕೆಲವೊಮ್ಮೆ ವಿಶ್ವಾಸದ ಆತ್ಮೀಯತೆಯಲಿ ಅಸಡ್ಡೆ ಮಾತುಗಳು ಕೇಳಿಬರುತ್ತವೆ. ಆ ಮಾತುಗಳು ನಮ್ಮ ಕಿವಿಗೆ ಕೇಳಲಿಲ್ಲ ಎಂಬಂತೆ ಅಸಡ್ಡೆ ತೋರಬೇಕು.
ಕೆಲವೊಮ್ಮೆ ಸತ್ಯದ ಮಾತುಗಳ ಮೂಲಕ ನಾಗರಿಕ ಸಮಾಜವನ್ನು ಉನ್ನತ ದಿಕ್ಕಿನತ್ತ ಕೊಂಡೊಯ್ಯುವ ಅವಕಾಶ ಇದ್ದರೂ ಸತ್ಯದ ಘನಘೋರ ಘಟನೆಗಳನ್ನು ಎದುರಿಸಲು ಸಾಧ್ಯವಿಲ್ಲದೆ ಮಾತನಾಡದೆ ಇರಬೇಕು.
ಈ ವಿಚಾರಗಳು ನಾಗರಿಕ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬದುಕಲು ಬೇಕಾದ ನೀತಿ ನಿಯಮಗಳ ಪಾಠವಾಗಿದೆ. ಈ ವಿಚಾರದಲ್ಲಿ ನಯನಾಜೂಕು ಅಳವಡಿಸಿಕೊಂಡು ನಾಟಕೀಯ ರೀತಿಯಲ್ಲಿ ಬದುಕಿದವರು ಯೋಗ್ಯತೆ ಮೀರಿ ಉನ್ನತ ಸ್ಥಾನ ಪಡೆದಿರುವುದಕ್ಕೆ ಹಲವು ಸಾಕ್ಷಿ ಗುಡ್ಡೆಗಳಿವೆ.
ಸತ್ಯ ಸುಳ್ಳಾಗದು, ಸುಳ್ಳು ಸತ್ಯವಾಗದು, ಬದುಕಿನ ಆದರ್ಶ ಜೀವಿಸಬೇಕು ಅದುವೆ ಜೀವನದ ಸಾರ್ಥಕತೆ ಎಂದು ರಘು ಗೌಡ ತಿಳಿಸಿದ್ದಾರೆ.