ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಹೊರ ವಲಯದ ಮಹದೇವಪುರದ ಕಿತ್ತಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಎರಡು ವರ್ಷದ ಮಗು ತ್ರಿಶೂಲ್ ಸಾವನ್ನಪ್ಪಿದೆ.
ರಸ್ತೆಯ ದುಸ್ಥಿತಿಯೇ ಮಗುವಿನ ಸಾವಿಗೆ ಕಾರಣವೆಂದು ಆರೋಪಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಕಾಮಗಾರಿಯ ನಿರ್ಲಕ್ಷ್ಯ ಖಂಡಿಸಿ, ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಕಳೆದ ಐದಾರು ವರ್ಷಗಳಿಂದಲೂ ರಸ್ತೆಯ ಸ್ಥಿತಿ ಹೀಗೇ ಇದೆ. ಇದು ಈ ರಸ್ತೆಯಲ್ಲಿ ನಡೆದ ಐದನೇ ಸಾವು ಎಂದು ದೂರಿದ್ದಾರೆ.
ಸ್ಥಳಕ್ಕೆ ಯಾವುದೇ ಜನಪ್ರತಿನಿಧಿಗಳು ಅಥವಾ ಪಿಡಿಒ ಭೇಟಿ ನೀಡದಿರುವುದು ಅವರ ಸಿಟ್ಟಿಗೆ ಮತ್ತಷ್ಟು ಕಾರಣವಾಗಿದೆ. ರಸ್ತೆ ಸರಿಪಡಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

