ಯುಗಾದಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಯುಗ ಯುಗಾದಿ ಕಳೆದರೂ
ಯುಗ ಯುಗಗಳೆ ಕಳೆದರೂ
ಹಸಿವು ಮರಳಿ ಬರುತಿದೆ
ಹೊಸ ವರುಷಕೆ
ಹೊಸಹರುಷವು
ಮತ್ತೆ ಮತ್ತೆ ಮರೆಸಿದೆ
ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅಪಮಾನ
ಮರಳಿ ಮರಳಿ ಬರುತಿದೆ
ಅತ್ತೂ ಅತ್ತೂ ರಕ್ತ ಕಣ್ಣೀರು ಸುರಿಸಿದೆ
ಯುಗಸ್ಥ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅಸ್ಪೃಶ್ಯತೆ ಮರಳಿ ಮರಳಿ ಬರುತಿದೆ
ಗುಡಿ ಚರ್ಚ್ ಮಸೀದಿ
ದೂರ ದೂರ ನಗುತಿವೆ
ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಜಾತೀಯತೆ ಮರಳಿ ಮರಳಿ ಬರುತಿದೆ
ಕೆರೆ ಕಟ್ಟೆ ಬಾವಿ ನಳದ ನೀರು
ಕೖ ಸನ್ನೆ ಕುಹಕ ಮಾಡಿ ನುಡಿತಿವೆ
ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಶೋಷಣೆ ಮರಳಿ ಮರಳಿ ಬರುತಿದೆ
ಶೋಷಕರ ಅಟ್ಟಹಾಸ
ದಿನ ದಿನವು ಮಿತಿಮೀರಿದೆ
ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅತ್ಯಾಚಾರ ಮರಳಿ ಮರಳಿ ಬರುತಿದೆ
ಕಾಮುಕರ ಕಪಿ ಮುಷ್ಟಿಗೆ ಹೆಣ್ಣು ಜೀವ ಅಳುತಿದೆ
ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅಧರ್ಮ ಮರಳಿ ಮರಳಿ ಬರುತಿದೆ
ಕಾವಿಬಟ್ಟೆ ಕೋವಿ ಆಗಿ
ಬಡಜನರ ಜೀವ ಸುಡುತಿದೆ
ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಭ್ರಷ್ಟಾಚಾರ ಮರಳಿ ಮರಳಿ
ಬರುತಿದೆ
ಖಾದಿ ಖಾಕಿ ಊರು ಕೇರಿ
ಕತ್ತು ಕೊಯ್ದು ಕೇಕೆ ಹಾಕಿ ಕುಣಿತಿವೆ
ಬೆಲ್ಲ ಇಲ್ಲ ಬೇವೇ ಎಲ್ಲ
ಬಡವ ಮಹಿಳೆ ದಲಿತರಿಗಷ್ಟೇ ಏತಕೆ?
ಕವಿತೆ:ಡಾ. ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ
ಕನ್ನಡ ಉಪನ್ಯಾಸಕರು
ಚಿತ್ರದುರ್ಗ

