ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ, ಸುಮ್ಮನೆ ಹಠ ಹಿಡಿಯೋದು ಬೇಡ-ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ನೌಕರರು ಸುಮ್ಮನೆ ಹಠ ಹಿಡಿಯೋದು ಬೇಡ. ಕಾನೂನಿಗೆ ಗೌರವ ಕೊಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಸ್ತೆ ಸಾರಿಗೆ ನೌಕರರಿಗೆ ಮನವಿ ಮಾಡಿದರು

ನಗರದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ವಿಚಾರವಾಗಿ ಪ್ರತಿಕ್ರಿಯಿಸಿ, ಸಾರಿಗೆ ನೌಕರರ ಬೇಡಿಕೆಗಳು ತಪ್ಪು ಅಂತ ಹೇಳಲ್ಲ.

- Advertisement - 

ನೌಕರರು ಮತ್ತು ಹೋರಾಟಗಾರರು ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು. ಸಿಎಂ, ಸಾರಿಗೆ ಸಚಿವರು ಸಹಾಯ ಮಾಡಬೇಕೆಂದಿದ್ದಾರೆ. ನಾಗರಿಕರನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಡಿಸಿಎಂ ತಿಳಿಸಿದರು.

ಸರ್ಕಾರಕ್ಕೆ ಮಾಡಲು ಆಗದೆ ಇರೋದನ್ನು ಮಾಡಿ ಎನ್ನುವುದು ಸರಿಯಲ್ಲ. ನಾನು ಅವರಿಗೆ ಮನವಿ ಮಾಡುತ್ತೇನೆ. ನಾಗರಿಕರಿಗೆ ನಾವು ಪ್ರಾಮುಖ್ಯತೆ ಕೊಡಬೇಕು. ಕೆಲ ಚಾಲಕರು, ಕಂಡಕ್ಟರ್ ಇವತ್ತು ಡ್ಯೂಟಿಗೆ ಬಂದಿದ್ದಾರೆ. ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು.

- Advertisement - 

ಸಾರ್ವಜನಿಕರ ಬದುಕು ಬಹಳ ಮುಖ್ಯ. ನೀವು ಹಠ ಮಾಡೋದು ಸರಿಯಲ್ಲ. ನಿಮ್ಮ ಬೇಡಿಕೆ ಈಡೇರಿಸಲು ಅವಕಾಶ ಇದ್ರೆ ಸಿಎಂ ಮಾಡ್ತಾರೆ. ನೀವು ಸಮಾಜ ಸೇವೆಗೆ ಬಂದವರು, ದಯಮಾಡಿ ಸಹಕಾರ ಕೊಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಿನಂತಿಸಿದರು.

ಗೃಹ ಸಚಿವ ಜಿ. ಪರಮೇಶ್ವರ್ ಅವರು ಸದಾಶಿವನಗರ ನಿವಾಸದ ಬಳಿ ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಪ್ರತಿಕ್ರಿಯಿಸಿ, ಇಲ್ಲಿವರೆಗೆ ಯಾವುದೇ ದೊಡ್ಡ ಅಹಿತಕರ ಘಟನೆ ನಡೆದಿಲ್ಲ. ಎಲ್ಲಾ ಕಡೆ ಅಗತ್ಯ ಬಂದೋಬಸ್ತ್ ಮಾಡಲಾಗಿದೆ.

ಸಂಪೂರ್ಣ ಬಂದ್ ಮಾಡಿದ್ರೆ ತೊಂದರೆ ಆಗುತ್ತಿತ್ತು. ಆದರೆ ಕೆಲವು ಕಡೆ ಬಸ್‌ಗಳು ಓಡಾಡ್ತಿವೆ. ಸಣ್ಣಪುಟ್ಟ ಗಲಾಟೆ ನಡೆದರೆ ಕ್ರಮ ವಹಿಸಲಾಗುತ್ತದೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

 

 

Share This Article
error: Content is protected !!
";