ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಸ್ಸಾಂ ರಾಜ್ಯದ ಬೋಕಾಜನ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಸುಧಾರಿತ ಜೀವರಕ್ಷಕ ಆಂಬ್ಯುಲೆನ್ಸ್ ಅನ್ನು ಸಮರ್ಪಿಸುವ ಸೌಭಾಗ್ಯ ನನ್ನದಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರಿಚರ್ಡ್ಸನ್ & ಕ್ರುಡ್ಡಾಸ್ ಲಿಮಿಟೆಡ್ ಮತ್ತು CCI ಬೋಕಾಜನ್ ಕಂಪನಿಗಳ CSR ಉಪಕ್ರಮದಿಂದ ಬೋಕಾಜನ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ತುರ್ತು ವೈದ್ಯಸೇವೆ ಒದಗಿಸಲು ಇದರಿಂದ ಸಹಕಾರಿ ಆಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಈಶಾನ್ಯ ಭಾಗದ ಅಭಿವೃದ್ಧಿಗೆ ಪರಿವರ್ತನತಾತ್ಮಕ ಶಕ್ತಿ ತುಂಬಿದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದು ಅವರು ತಿಳಿಸಿದ್ದಾರೆ.
2015ರಿಂದಲೂ ಪ್ರತೀ 15 ದಿನಗಳಿಗೊಮ್ಮೆ ಕೇಂದ್ರ ಸಚಿವರು ಈ ಪ್ರದೇಶಕ್ಕೆ ತೆರಳಿ, ಅಲ್ಲಿ ನಡೆದಿರುವ ಐತಿಹಾಸಿಕ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಖುದ್ದು ಪರಿಶೀಲಿಸುವ ಕೆಲಸ ನಡೆದಿದ್ದು, ಈ ಉಪಕ್ರಮವು ಈಶಾನ್ಯದ ಜನರ ಶ್ರೆಯೋಭಿವೃದ್ಧಿ ಮತ್ತು ಸಂಪರ್ಕಕ್ಕೆ ಅಪ್ರತಿಮ ವೇಗ ನೀಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಷ್ಟ್ರದ ಅತ್ಯಂತ ಹಳೆಯ ಸಿಮೆಂಟ್ ಸ್ಥಾವರಗಳಲ್ಲಿ ಒಂದಾದ ಬೋಕಾಜನ್ʼನ @cement_cci ಘಟಕವು ಕಳೆದ 3 ವರ್ಷಗಳಲ್ಲಿ ಗಮನಾರ್ಹ ಮೈಲುಗಲ್ಲುಗಳನ್ನು ದಾಟಿ ಲಾಭದ ಹಳಿಗೆ ಮರಳಿದೆ. ಘಟಕದ ವಿಸ್ತರಣಾ ಯೋಜನೆಗಳು ಸಕ್ರಿಯವಾಗಿದ್ದು, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯನ್ನು ಐದು ಪಟ್ಟು ಹೆಚ್ಚಿಸಲು ಮತ್ತು ಅಸ್ಸಾಂನಲ್ಲಿ ಕೈಗಾರಿಕಾ ಚಟುವಟಿಕೆಯನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿಗಳ ಮಾರ್ಗದರ್ಶನದಲ್ಲಿ ಅಹರ್ನಿಷಿ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.
ಈ ಪ್ರಯತ್ನಗಳಲ್ಲಿ ನಮಗೆ ಬೆಂಬಲ ನೀಡಿದ ಶ್ರೀ ತುಲಿರಾಮ್ ರೊಂಗ್ ಹಾಂಗ್ (ಸಿಇಎಂ, ಕೆಎಎಸಿ), ಡಾ. ನುಮಲ್ ಮೋಮಿನ್ (ಉಪ ಸ್ಪೀಕರ್, ಅಸ್ಸಾಂ ವಿಧಾನಸಭೆ) ಮತ್ತು ಬೋಕಾಜನ್ ಜನತೆಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಸ್ವಾವಲಂಬಿ ಈಶಾನ್ಯ ನಿರ್ಮಿಸಲು, ಬಲವಾದ ಕೈಗಾರಿಕೆ ಮತ್ತು ಸುಸ್ಥಿರ ಬೆಳವಣಿಗೆ ಮೂಲಕ ಪ್ರತೀ ಸಮುದಾಯವನ್ನು ಸಬಲೀಕರಣಗೊಳಿಸಲು ದೃಢನಿಶ್ಚಯ ಹೊಂದಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.

