ಸರ್ವಜನಾಂಗದೊಂದಿಗೆ ಕೂಡಿ ಬದುಕುವುದೇ ಒಕ್ಕಲುತನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾತಂತ್ರ್ಯ ಪೂರ್ವದ ಆ ದಿನಗಳಲ್ಲಿ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಒಕ್ಕಲುತನದ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯ ಸೇರಿದಂತೆ ಸರ್ವಜನಾಂಗದ ಮಕ್ಕಳ ಹಿತದೃಷ್ಟಿಗೆ ಒಕ್ಕಲಿಗರ ಸಂಘ ಉದಯವಾಗಿದೆ.

ಆ ದಿನಗಳಲ್ಲಿ  ಒಕ್ಕಲಿಗರ ಸಂಘದ ಪರವಾಗಿ ಅನೇಕ ಒಕ್ಕಲಿಗ ಮನೆತನದವರು ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಜಮೀನುಗಳನ್ನು ಸೇರಿದಂತೆ ಧನಸಹಾಯವನ್ನು ಮಾಡಿ ಔದಾರ್ಯವನ್ನು ತೋರಿಸಿದ್ದು ಒಂದು ಇತಿಹಾಸ. ದಿನಗಳು ಕಳೆದಂತೆ ಒಕ್ಕಲಿಗರ ಸಂಘ ಬೆಳೆದು ವಿವಿಧ ವಿಭಾಗಗಳಲ್ಲಿ ವಿದ್ಯಾಸಂಸ್ಥೆಯು ಬೆಳೆದು ನಿಂತಿದೆ.

- Advertisement - 

ರಾಜ್ಯ ಒಕ್ಕಲಿಗರ ಸಂಘದ ಸಮಿತಿಗೆ ನೂತನ ಅಧ್ಯಕ್ಷರಾಗಿ ಬಿ ಕೆಂಚಪ್ಪ ಗೌಡರು ಆಯ್ಕೆಯಾಗಿದ್ದಾರೆ. ಇವರಿಗೆ ಅಭಿನಂದನೆಗಳು. ಕೆಂಚಪ್ಪ ಗೌಡರು ಈ ಹಿಂದೆ 2008 ರಲ್ಲಿ ಒಕ್ಕಲಿಗರ ಸಂಘಕ್ಕೆ ಅಧ್ಯಕ್ಷರಾಗಿದ್ದರು. 2010ರ ಸುಮಾರಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸದಾನಂದಗೌಡರು ಇರುವಂತಹ ಸಂದರ್ಭದಲ್ಲಿ ಒಕ್ಕಲಿಗರ ಸಂಘದಿಂದ ಒಂದು ಸಮಾವೇಶ ಆಯೋಜಿಸಲಾಗಿತ್ತು.

ಆ ಒಂದು ಸಮಾವೇಶದ ಮುಖ್ಯ ಸನ್ನಿವೇಶದಲ್ಲಿ ನನಗೆ ಕೆಂಚಪ್ಪ ಗೌಡರೂಂದಿಗೆ ಪರಿಚಯದ  ಹಂಚಿಕೆ ಆಗಿತ್ತು. ಕೆಂಚಪ್ಪ ಗೌಡರ ಆಡಳಿತದಲ್ಲಿ ಒಕ್ಕಲುತನದ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯಕ್ಕೆ ಒಂದಿಷ್ಟು ಒಳ್ಳೆಯ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ. ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ.
ಕಿರು ಮಾಹಿತಿ-ರಘು ಗೌಡ

- Advertisement - 

Share This Article
error: Content is protected !!
";