ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಸಹಾಯಕ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೇ ಇಲ್ನೋಡಿ ಎಂದು ಜೆಡಿಎಸ್ ಬೊಟ್ಟು ಮಾಡಿ  ತೋರಿಸಿದೆ.

ಅರಕಲಗೂಡು ತಾಲ್ಲೂಕು ಕಚೇರಿಯಲ್ಲಿ ಲಂಚಬಾಕ ರೆವಿನ್ಯೂ ಇನ್ಸ್‌ ಪೆಕ್ಟರ್‌, ರೈತರ ಜಮೀನಿಗೆ ಖಾತೆ ಮಾಡಲು ಲಂಚ ಪಡೆಯುತ್ತಿದ್ದಾನೆ.

- Advertisement - 

ಜಮೀನಿನ ಖಾತೆ ಮಾಡಿಕೊಡದಿದ್ದಕ್ಕೆ ನೊಂದ ರೈತ ತಾನು ಕೊಟ್ಟಿರುವ ಹಣ ವಾಪಸ್‌ ಕೇಳಿದ್ದಕ್ಕೆ, ಈ ನೀಚ ಮನಸ್ಥಿತಿಯ ಅಧಿಕಾರಿ ಯಾವ ರೀತಿ ಅಸಭ್ಯವಾಗಿ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ ಕೇಳಿಸಿಕೊಳ್ಳಿ ಎಂದು ವಿಡಿಯೋ ಅಪ್ ಲೋಡ್ ಮಾಡಿದೆ.

ಇದೇನಾ ನಿಮ್ಮ ಜನಪರ ಆಡಳಿತ? ಕಂದಾಯ ಸಚಿವರೇ ಭ್ರಷ್ಟಾಚಾರದ ಕೂಪವಾಗಿರುವ ಕಂದಾಯ ಇಲಾಖೆಯನ್ನು ಸರಿಪಡಿಸಿ.

- Advertisement - 

ಈ ಧನದಾಹಿ ಲಂಚಬಾಕ ರೆವಿನ್ಯೂ ಇನ್ಸ್‌ ಪೆಕ್ಟರ್‌ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ರೈತರನ್ನು ಬದುಕಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

Share This Article
error: Content is protected !!
";