ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ ಘೋಷಣೆಯಾಗಿತ್ತು. ನವೆಂಬರ್-9ರಂದು ನಡೆಯಬೇಕಿದ್ದಂತ ಚುನಾವಣೆಗೆ ಪೂರ್ವದಲ್ಲೇ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದೆ.

ಈ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಮಾಹಿತಿ ನೀಡಿದ್ದು, ದಿನಾಂಕ 09-11-2025ರಂದು ನಡೆಯಲಿರುವ ಚುನಾವಣೆಗೆ, ಕೆಯುಡಬ್ಲ್ಯೂಜೆ ಸಂಘದ ರಾಜ್ಯ ಘಟಕದ ಚುನಾವಣೆಯಲ್ಲಿ ಆಯ್ಕೆಯಾಗಬೇಕಿದ್ದ ಅಷ್ಟೂ  ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

- Advertisement - 

ಶಿವಾನಂದ ತಗಡೂರು-ಅಧ್ಯಕ್ಷರು, ಹೆಚ್.ಬಿ ಮದನಗೌಡ-ಉಪಾಧ್ಯಕ್ಷರು, ಮತ್ತೀಕೆರೆ ಜಯರಾಮ್-ಉಪಾಧ್ಯಕ್ಷರು, ಅಜ್ಜಮಾಡು ರಮೇಶ್ ಕುಟ್ಟಪ್ಪ-ಉಪಾಧ್ಯಕ್ಷರು.

ಜೆ.ಸಿ ಲೋಕೇಶ-ಪ್ರಧಾನ ಕಾರ್ಯದರ್ಶಿ, ಪುಂಡಲೀಕ ಬಿ ಬಾಳೋಜಿ-ಕಾರ್ಯದರ್ಶಿ, ಸೋಮಶೇಖರ ಕೆರಗೋಡು-ಕಾರ್ಯದರ್ಶಿ, ನಿಂಗಪ್ಪ ಚಾವಡಿ- ಕಾರ್ಯದರ್ಶಿ. ವಾಸುದೇವ ಹೊಳ್ಳ ಎಂ ರಾಜ್ಯ ಖಜಾಂಚಿ ಈ ಎಲ್ಲಾ ಅಭ್ಯರ್ಥಿಗಳನ್ನು 9-10-2025 ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

- Advertisement - 

 

Share This Article
error: Content is protected !!
";