ಹಾಪ್‍ಕಾಮ್ಸ್ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೋಟಗಾರಿಕೆ ಸಹಕಾರ ಸಂಘಗಳು ಮತ್ತು ತಾಲ್ಲೂಕು ಕೃಷಿ ಮಾರಾಟ ಸಹಕಾರ ಸಂಘಗಳಿಂದ ಹಾಪ್ ಕಾಮ್ಸ್ (ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ 13 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನಿಂದ ಎಸ್.ಪಿ.ಲತಾ, ಹೆಚ್.ಎನ್.ತಿಪ್ಪೇಸ್ವಾಮಿ, ಎನ್.ಡಿ.ಚಂದ್ರಶೇಖರ ರೆಡ್ಡಿ, ಹಿರಿಯೂರು ತಾಲ್ಲೂಕಿನಿಂದ ಆರ್.ಕೀರ್ತಿಕುಮಾರಿ, ಎಸ್.ಜೆ.ಹನುಮಂತರಾಯ, ಚಳ್ಳಕೆರೆ ತಾಲ್ಲೂಕಿನಿಂದ ಮಲ್ಲಿಕಾರ್ಜುನ, ಹೆಚ್.ಟಿ.ಶಶಿಧರ,

- Advertisement - 

ಮೊಳಕಾಲ್ಮೂರು ತಾಲ್ಲೂಕಿನಿಂದ ಹೆಚ್.ಟಿ.ನಾಗರೆಡ್ಡಿ, ಎ.ಚನ್ನಬಸಪ್ಪ, ಹೊಳಲ್ಕೆರೆ ತಾಲ್ಲೂಕಿನಿಂದ ಟಿ.ತಿಮ್ಮಪ್ಪ, ಅರುಣಕುಮಾರ್.ಎಂ.ಬಿ. ಹೊಸದುರ್ಗ ತಾಲ್ಲೂಕಿನಿಂದ ಟಿ.ಎಸ್.ಶಂಕರಮೂರ್ತಿ, ಜೆ.ಡಿ.ಕೆಂಚವೀರಪ್ಪ ನಿದೇಶಕರಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಅ.19 ರಂದು ಚುನಾವಣೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಅ.14 ರಂದು ನಾಮಪತ್ರ ಪರಿಶೀಲನೆ ನಂತರ 13 ಸದಸ್ಯರು ಅವಿರೊಧ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

 

Share This Article
error: Content is protected !!
";