ಮಾರ್ಚ್.30 ರಂದು ವದ್ದೀಕೆರೆ ಶ್ರೀ ಕಾಲಭೈರವೇಶ್ವರ ಬ್ರಹ್ಮರಥೋತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರ ವದ್ದೀಕೆರೆಯ ಶ್ರೀ ಕಾಲಭೈರವೇಶ್ವರಸ್ವಾಮಿ ಯಾನೆ ಶ್ರೀ ಸಿದ್ಧೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 27 ರಿಂದ ಏಪ್ರಿಲ್ 1 ರವರೆಗೆ ಅದ್ದೂರಿಯಾಗಿ ಜರುಗಲಿದೆ. ಪವಿತ್ರ ಕ್ಷೇತ್ರ ವದ್ದೀಕೆರೆಯಲ್ಲಿ ನೆಲೆಸಿರುವ ಭಕ್ತರ ಆರಾಧ್ಯ ದೈವ ಶ್ರೀ ಕಾಲಭೈರವೇಶ್ವರಸ್ವಾಮಿಯ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 27ರ ಶುಕ್ರವಾರ ರಾತ್ರಿ 8-00 ಗಂಟೆಗೆ ಕಂಕಣಧಾರಣೆಯೊAದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಮಾರ್ಚ್ 28ರ ಶನಿವಾರ ರಾತ್ರಿ 7-00 ಗಂಟೆಗೆ ಭಕ್ತಿಪೂರ್ವಕವಾಗಿ ಅಗ್ನಿಕುಂಡೋತ್ಸವ ನಡೆಯಲಿದ್ದು, ಮಾರ್ಚ್ 29ರ ಭಾನುವಾರ ರಾತ್ರಿ 8-00 ಗಂಟೆಗೆ ಚಿಕ್ಕ ರಥೋತ್ಸವ ಜರುಗಲಿದೆ.ಜಾತ್ರೆಯ ಪ್ರಮುಖ ಆಕರ್ಷಣೆಯಾದ ಬ್ರಹ್ಮರಥೋತ್ಸವವು ಮಾರ್ಚ್ 30ರ ಸೋಮವಾರ ಸಂಜೆ 4-30 ಗಂಟೆಗೆ ಅತ್ಯಂತ ವೈಭವದಿಂದ ಜರುಗಲಿದೆ.

- Advertisement - 

ಅಂದು ಮಧ್ಯಾಹ್ನ 3-30ಕ್ಕೆ ಹೂವಿನ ಪಲ್ಲಕ್ಕಿ ಉತ್ಸವ (ಅಡ್ಡ ಪಲ್ಲಕ್ಕಿ ಉತ್ಸವ) ನಡೆಯಲಿದ್ದು, ಜಾನಪದ ಕಲಾತಂಡಗಳ ವಿವಿಧ ಮೇಳಗಳೊಂದಿಗೆ ರಥೋತ್ಸವಕ್ಕೆ ವಿಶೇಷ ಕಳೆ ಬರಲಿದೆ. ತದನಂತರ ಮಾರ್ಚ್ 31ರ ಮಂಗಳವಾರ ಉಂಡೆ, ಮಂಡೆ ಮತ್ತು ಸಿದ್ಧಭುಕ್ತಿ ಕಾರ್ಯಕ್ರಮಗಳು ನಡೆಯಲಿದ್ದು, ಏಪ್ರಿಲ್ 1ರ ಬುಧವಾರ ಕಿರುಬಾಣ, ವಸಂತೋತ್ಸವ ಹಾಗೂ ಸಂಜೆ 6-00 ಗಂಟೆಗೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಹಾಗೂ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ವೀರಭದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";