ತೇರು ಮಲ್ಲೇಶ್ವರ ದೇವಸ್ಥಾನದಲ್ಲಿ ಎಸ್ ಎಸ್ ಅವರಿಗೆ ಸಂತಾಪ ಸಭೆ ಮಾಡಿದ ವೀರಶೈವ ಮಹಾಸಭಾ

News Desk

 ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಖಿಲ ಭಾರತ ವೀರಶೈವ ಮಹಾಸಭಾ ಹಿರಿಯೂರು ಘಟಕದ ವತಿಯಿಂದ ಸೋಮವಾರ ತೇರು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾಜದ ಹಿರಿಯರು, ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಸೇರಿ ಡಾ. ಶಾಮನೂರು ಶಿವಶಂಕರಪ್ಪ ರವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸಭೆ ನಡೆಸಲಾಯಿತು.

ಶಾಮನೂರು ಶಿವಶಂಕರಪ್ಪ ಅವರು ಸಮಾಜಕ್ಕಾಗಿ ಹಲವಾರು ವರ್ಷಗಳಿಂದ ಸಮಾಜಮುಖಿಯಾಗಿ ಶಿಕ್ಷಣ ಪ್ರೇಮಿಯಾಗಿ ಕೈಗಾರಿಕೋದ್ಯಮಿಯಾಗಿ ಸೇವೆ ಸಲ್ಲಿಸಿ ಕೊಡುಗೆ ನೀಡಿದ್ದಲ್ಲದೆ, ದಾನ ಯಾಗಿದ್ದು ಸಮಾಜದ ಏಳಿಗೆಗಾಗಿ ಅವಿರತ ಶ್ರಮವಹಿಸಿ ಜಾತ್ಯಾತೀತವಾಗಿ ಬದುಕಿ ತೋರಿಸಿದ್ದಾರೆ ಎಂದು ಸ್ಮರಿಸದರು.

- Advertisement - 

ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಮಾಜದ ವತಿಯಿಂದ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಜಿಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದು ಸಂತಾಪ ಸೂಚಿಸಲಾಯಿತು.

 

- Advertisement - 

 

Share This Article
error: Content is protected !!
";