ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅವಿಶ್ವಾಸ ಮಂಡನೆ ವಿಫಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ವಿರುದ್ದ ೧೪ ಸದಸ್ಯರು ಉಪ ವಿಭಾಗಧಿಕಾರಿಗಳಿಗೆ ಅವಿಶ್ವಾಸ ಮಂಡನೆ ಮಾಡಿದ್ದರು ಆದರೆ ಅವಿಶ್ವಾಸ ಸಾಬೀತು ಮಾಡದಿದ್ದ ಕಾರಣದಿಂದ ಉಮೇಶ್ ಅವರು ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ.

- Advertisement - 

ಭೀಮಸಮುದ್ರ ಗ್ರಾಮ ಪಂಚಾಯತಿಯಲ್ಲಿ ೨೦ ಗ್ರಾಮ ಪಂಚಾಯತಿ ಸದಸ್ಯರಲ್ಲಿ ೧೪ ಜನರು ಉಮೇಶ್ ವಿರುದ್ಧ ಅವಿಶ್ವಾಸ ಪತ್ರವನ್ನು ಉಪ ವಿಭಾಗಧಿಕಾರಿಗೆ ನೀಡಿದ್ದರು. ಆದ್ದರಿಂದ ೩-೩-೨೦೨೫ ರಂದು ಅವಿಶ್ವಾಸ ಮಂಡನೆಗೆ ಸಮಯ ನಿಗದಿಯಾಗಿತ್ತು. ಆದ್ದರಿಂದ ಇಂದು ಬೆಳಗ್ಗೆಯಿಂದ ಕೇವಲ ಒಬ್ಬರು ಸದಸ್ಯರು ಮಾತ್ರ ಆಗಮಿಸಿದ್ದರಿಂದ ಅವಿಶ್ವಾಸ ಮಂಡನೆ ವಿಫಲವಾಗಿದೆ.

- Advertisement - 

 

 

- Advertisement - 

Share This Article
error: Content is protected !!
";