ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಳೆದ 25 ವರ್ಷಗಳಿಂದಿನಿಂದ ಇಲ್ಲಿಯ ತನಕ ಕೇವಲ ಮೂರರಿಂದ ನಾಲ್ಕು ಬಾರಿ ದಿಂಡಾವರ ಕೆರೆ ತುಂಬಿದ್ದು ಸತತ ಬರಗಾಲಕ್ಕೆ ಒಳಗಾದ ದಿಂಡಾವರದ ಜನತೆ ಋಷಿ ಶೃಂಗೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ಹೋಮವನ್ನು ಮಂಗಳವಾರ ಮಾಡಿಸಿದ್ದಾರೆ.
ದಿಂಡಾವರ ಗ್ರಾಮದ ಯಾವುದೇ ಜಾತಿ ಜನಾಂಗಕ್ಕೆ ಸೀಮಿತವಾಗದೆ ಎಲ್ಲಾ ವರ್ಗದವರು ಸೇರಿ ದಿಂಡಾವರ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಹೋಮದ ಪ್ರಯುಕ್ತ ಕನಿಷ್ಠ ಒಂದೊಂದು ರೂಪಾಯಿಗಳನ್ನು ಸ್ವೀಕರಿಸಿ ಈ ಹೋಮ ಮಾಡಲಾಗಿದೆ.
ಋಷಿ ಶೃಂಗಿ ಮಹರ್ಷಿಗಳು ರಾಮಾಯಣದಲ್ಲಿ ದಶರಥ ಮಹಾರಾಜರಿಗೆ ಪುತ್ರ ಕಾಮಿಸ್ಟಿಯಾಗವನ್ನು ಮಾಡಿರುತ್ತಾರೆ. ಹಾಗೂ ಮಹರ್ಷಿಗಳು ಓದಲ್ಲೆಲ್ಲ ಮಳೆ ಬೆಳೆ ಸುಸೂತ್ರವಾಗಿ ಆಗುತ್ತದೆ ಎಂಬ ನಂಬಿಕೆಯಲ್ಲಿ ಇಡೀ ರಾಜ್ಯವೇ ಈ ದೇವಸ್ಥಾನಕ್ಕೆ ಶಿರಬಾಗುವುದನ್ನು ನಾವು ನೋಡುತ್ತಾ ಬಂದಿರುತ್ತೇವೆ.
ಈ ಸಂದರ್ಭದಲ್ಲಿ ಚಂದ್ರಗಿರಿ ದಿಂಡಾವರ ನಾರಾಯಣಸ್ವಾಮಿ, ಸುರೇಶ್ ಗೌಡ, ಶ್ರೀನಿವಾಸ್ ಹೆಚ್ಜೆ, ಗ್ರಾಮ ಪಂಚಾಯತಿ ಸದಸ್ಯ ವಿರೂಪಾಕ್ಷಪ್ಪ ಹಲವಾರು ಮುಖಂಡರು ಹಾಗೂ ಗ್ರಾಮಸ್ಥರು ಕೂಡಿ ಹೋಮ ಮಾಡಿಸುತ್ತಿರುತ್ತಾರೆ.
ಎಲ್ಲಾ ಋಷಿಮುನಿಗಳು ಹಾಗೂ ಭಕ್ತರು ಭಗವಂತನಲ್ಲಿ ಲೀನವಾದರೆ ಇಲ್ಲಿ ಇಲ್ಲಿ ಭಗವಂತನಾದ ಮಹಾದೇವ ಋಷಿ ಶೃಂಗಿ ಮಹರ್ಷಿಗಳಲ್ಲಿ ಲೀನವಾಗಿರುವ ಭಾರತದಲ್ಲಿ ಇರುವ ಏಕೈಕ ದೇವಾಲಯ ಇದಾಗಿದೆ ಎಂದು ಭಕ್ತ ಗ್ರಾಮಸ್ಥರ ಅಭಿಪ್ರಾಯವಾಗಿದೆ.