ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ- ವಿಶ್ವನಾಥ್

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಕುರಿತು ಶ್ವೇತಪತ್ರ ಹೊರಡಿಸಿ
, ರಾಜ್ಯದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನ ಬಹಿರಂಗ ಪಡಿಸಬೇಕೆಂದು ವಿಧಾನ ಪರಿಷತ್‌ಶಾಸಕ ಹೆಚ್. ವಿಶ್ವನಾಥ್‌ಆಗ್ರಹಿಸಿದ್ದಾರೆ.

- Advertisement - 

ನಗರದ ಜಲದರ್ಶನಿ ಅತಿಥಿ ಗೃಹದಲ್ಲಿ ಗುರುವಾರ ಅವರು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ದಿವಾಳಿ ಹಂಚಿಗೆ ತಲುಪಿರುವ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದರೂ ಹುಚ್ಚು ಹುಚ್ಚಾಗಿ ಹಣ ಖರ್ಚು ಮಾಡುತ್ತಿದ್ದಾರೆ.

- Advertisement - 

ಆಡಳಿತದಲ್ಲಿ ಬಿಗಿ ಹಿಡಿತ ಇಲ್ಲದ ಕಾರಣ ಐಎಎಸ್‌ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್‌ಅಧಿಕಾರಿ ಡಿ.ರೂಪಾ ಬೀದಿ ಜಗಳ ರಂಪಾಟವಾದಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಅವರು ಕಿಡಿಕಾರಿದರು.

ಪ್ರಿನ್ಸೆಸ್‌ ರಸ್ತೆ ಜಟಾಪಟಿ:
ಕೆಆರ್​ಎಸ್ ರಸ್ತೆಗೆ ಪ್ರಿನ್ಸೆಸ್​ ಎಂಬ ಹೆಸರಿನ ಬಗ್ಗೆ ಹಲವು ರೀತಿಯ ದಾಖಲೆಗಳಿವೆ. ಪ್ರಿನ್ಸೆಸ್‌ರಸ್ತೆ ಹೆಸರಿನ ಬದಲಿಗೆ ಸಿದ್ದರಾಮಯ್ಯನವರ ಹೆಸರನ್ನ ಇಡಲು ಹೋಗಿ ಸಿದ್ದರಾಮಯ್ಯ ಬೆಂಬಲಿಗರು ಅವರ ಹೆಸರನ್ನ ಕೆಡಿಸಲು ಹೊರಟಿದ್ದಾರೆ. ಈ ರೀತಿಯ ಅಪಮಾನ ಸಿದ್ದರಾಮಯ್ಯನವರಿಗೆ ಬೇಡ. ಜನ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದಾರೆ. ಎಲ್ಲವನ್ನೂ ಅನುಭವಿಸಿದ್ದೀರಿ. ಈಗ ಈ ವಿಚಾರ ಇಲ್ಲಿಗೆ ಬಿಡದಿದ್ದರೆ ಸಿದ್ದರಾಮಯ್ಯ ಬೆಂಬಲಿಗರು ಮೈಸೂರಿನಲ್ಲಿ ಮತ್ತೊಮ್ಮೆ ನಿಮ್ಮ ಹೆಸರನ್ನು ಕೆಡಿಸುತ್ತಾರೆ ಎಂದು ಹೆಚ್​ ವಿಶ್ವನಾಥ್​ ಕಿವಿ ಮಾತು ಹೇಳಿದ್ದಾರೆ.

- Advertisement - 

ಅರಸರ ಬಗ್ಗೆ ಮಾತುಬೇಡ:
ಕೆಪಿಸಿಸಿ ಮಾಧ್ಯಮ ವಕ್ತಾರ ಲಕ್ಷ್ಮಣ್‌ಅವರ ಸಂಸದ ಯದುವೀರ್‌ನಕಲಿ ಮಹಾರಾಜ ಎನ್ನುವ ಹೇಳಿಕೆಗೆ ವಿಶ್ವನಾಥ್‌ ತಿರುಗೇಟು ನೀಡಿ
, ಈ ರೀತಿಯ ಟೀಕೆ ಮಾಡುವುದರಿಂದ ಲಕ್ಷ್ಮಣ್‌ಅವರಿಗೆ ಒಳ್ಳೆಯದು ಆಗುವುದಿಲ್ಲ. ಮೈಸೂರಿನ ಯದುವಂಶ ಅರಸರ ಬಗ್ಗೆ ನೀವು ಮಾತನಾಡಿದರೆ ನೀವೇ ಚೀಪ್‌ಆಗುತ್ತೀರಾ ಹೊರತು, ಮೈಸೂರು ಅರಸರಿಗೆ ಏನೂ ಆಗುವುದಿಲ್ಲ. ಇದೇ ತಿಂಗಳು ಜನವರಿ 7 ರಂದು ಅಮಿತ್‌ಶಾ ಹೇಳಿಕೆ ಕುರಿತು ಮೈಸೂರು ಬಂದ್​ಗೆ ಕರೆ ನೀಡಿದ್ದು, ಇದಕ್ಕೆ ನನ್ನ ಬೆಂಬಲ ಇದೆ ಎಂದು ವಿಶ್ವನಾಥ್ ತಿಳಿಸಿದರು.

ನಟ ಶಿವರಾಜ್‌ಕುಮಾರ್‌ಅವರು ಕ್ಯಾನ್ಸರ್​ ರೋಗಕ್ಕೆ ಯಶಸ್ವಿ ಚಿಕಿತ್ಸೆ ಪಡೆದಿದ್ದು ಅವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುವುದಾಗಿ ಹೆಚ್​ ವಿಶ್ವನಾಥ್ ಹೇಳಿದರು.

 

Share This Article
error: Content is protected !!
";