“ವಕ್ಫ್ ಹಟಾವೋ-ಕಿಸಾನ್ ಬಚಾವೋ”

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟ್ರೋಲ್ ಮಿನಿಸ್ಟರ್ ಪ್ರಿಯಾಂಕ ಖರ್ಗೆ ಅವರ ತವರಲ್ಲಿ ಮಠಾಧೀಶರ ಪ್ರತಿಭಟನೆಗೂ ಅನುಮತಿಯಿಲ್ಲ!! ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯದ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಮಠ-ಮಂದಿರಗಳ ಭೂಮಿಯನ್ನು ಮಾತ್ರ ಕಸಿಯುತ್ತಿಲ್ಲ, ಬದಲಿಗೆ ಮಠಾಧೀಶರ ಹೋರಾಟದ ಹಕ್ಕನ್ನೇ ಕುಸಿಯುತ್ತಿದೆ ಎಂದು ಬಿಜೆಪಿ ದೂರಿದೆ.

ವಕ್ಫ್ ಹಟಾವೋ-ಕಿಸಾನ್ ಬಚಾವೋ” ಹೆಸರಿನಲ್ಲಿ ಕಲ್ಬುರ್ಗಿಯಲ್ಲಿ ಮಠಾಧೀಶರು ಬೀದಿಗಿಳಿದು ಪ್ರತಿಭಟನೆಗೆ ಮುಂದಾದರೆ, ಅದಕ್ಕೆ ಅನುಮತಿಯನ್ನು ಸಹ ನೀಡದೆ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದೆ.

ಸಿಎಂ ಸಿದ್ದರಾಮಯ್ಯ ಮಠಾಧೀಶರ ಪ್ರತಿಭಟನೆಗೆ ಅಡ್ಡಿ ಉಂಟು ಮಾಡಿದರೆ, ರಾಜ್ಯಾದ್ಯಂತ ಮಠಾಧೀಶರ ಜೊತೆ ಸಾರ್ವಜನಿಕರು ಬೀದಿಗಿಳಿಯುವುದು ನಿಶ್ಚಿತ ಎಂದು ಬಿಜೆಪಿ ಎಚ್ಚರಿಸಿದೆ.

 

 

Share This Article
error: Content is protected !!
";