ಭಾರತದ ಪ್ರಜೆಗಳಾದ ನಾವು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತದ ಪ್ರಜೆಗಳಾದ ನಾವು
ಮಂದಿರ ಮಸೀದಿ ಚರ್ಚ್ ಬಸದಿಗೆ ಒಟ್ಟೊಟ್ಟಿಗೆ ಹೋಗೋಣ 

ಭಾರತದ ಪ್ರಜೆಗಳಾದ ನಾವು
ಕೆರೆ ಹಳ್ಳ ಕೊಳ್ಳ ನದಿ  ನಳ ಸಮುದ್ರ ಝರಿ ಜಲಪಾತದ
ನೀರುಒಟ್ಟೊಟ್ಟಿಗೆ ಕುಡಿದು ಕುಣಿದು ಕುಪ್ಪಳಿಸೋಣ 

- Advertisement - 

ಭಾರತದ ಪ್ರಜೆಗಳಾದ ನಾವು
ಮದುವೆ ಹಬ್ಬ ಜಾತ್ರೆ ಹೋಟೆಲ್ ಸಹಬೋಜನವ
ಒಟ್ಟೊಟ್ಟಿಗೆ ಮಾಡೋಣ 

ಭಾರತದ ಪ್ರಜೆಗಳಾದ ನಾವು
ಜಾತಿ ಧರ್ಮ ಲಿಂಗ ವರ್ಗ ವರ್ಣ ಬಡವ ಶ್ರೀಮಂತ
ಅಸಮಾನತೆ ತೊಡೆದು
ಸಮಾನತೆಯ ಹೆಜ್ಜೆ ಹಾಕೋಣ

- Advertisement - 

 ಭಾರತದ ಪ್ರಜೆಗಳಾದ ನಾವು
ಕಟಿಂಗ್ ಶಾಪ್ ಇಸ್ತ್ರಿ ಅಂಗಡಿ ಮೈಲಿಗೆ ಮಲಿನ ತೊಳೆಯೋಣ 

ಭಾರತದ ಪ್ರಜೆಗಳಾದ ನಾವು
ಸ್ವಾತಂತ್ರ್ಯ ಸಮಾನತೆ ಬ್ರಾತೃತ್ವದ ನಾಡಕಟ್ಟೋಣ
ಕವಿತೆ-ಡಾ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಕನ್ನಡ ಉಪನ್ಯಾಸಕರು.

Share This Article
error: Content is protected !!
";