ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಸಕ ಶಿವಲಿಂಗೇಗೌಡರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೇ ? ಎಂದು ಜೆಡಿಎಸ್ ವಿಡಿಯೋ ಅಪ್ ಲೋಡ್ ಮಾಡಿ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಅವರೇ ಪ್ರಶ್ನಿಸಿದೆ.
ಪ್ರತಿಪಕ್ಷಗಳ ಶಾಸಕರನ್ನು ಅವಾಚ್ಯವಾಗಿ, ಕೆಟ್ಟ ಭಾಷೆಯಲ್ಲಿ ಬೈದು, ಅಂಸವಿಧಾನಿಕವಾಗಿ ನಿಂದಿಸಿ, ಸಭಾಧ್ಯಕ್ಷರ ಎದುರೇ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದು ಅಕ್ಷಮ್ಯ ಅಪರಾಧ.
ಓರ್ವ ಜನಪ್ರತಿನಿಧಿಯಾಗಿ ಸಂಸದೀಯ ಮೌಲ್ಯಗಳಿಗೆ ಅಪಚಾರ ಎಸಗಿರುವ ಹಾಗೂ ಸದನದ ಘನತೆಗೆ ಧಕ್ಕೆ ತಂದಿರುವ ಶಿವಲಿಂಗೇಗೌಡರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.
ಮುಂದಿನ ಎಲ್ಲಾ ಸದನದಿಂದ ಅಮಾನತುಗೊಳಿಸಿ, ಸದನದ ಕಾರ್ಯ ಕಲಾಪಗಳಿಂದ ದೂರವಿಡಬೇಕು ಎಂದು ವಿಧಾನಸಭಾಧ್ಯಕ್ಷರಿಗೆ ಜೆಡಿಎಸ್ ಪಕ್ಷವು ಆಗ್ರಹಿಸಿದೆ.

