ದೇಶದ್ರೋಹಿ ಎಸ್‌ಡಿಪಿಐ, ಪಿಎಫ್ಐ ಜೊತೆಗಿನ ನೆಂಟಸ್ತಿಕೆ ಬೆಳೆಸಿದ್ದು ಯಾರು ಖರ್ಗೆ ಅವರೇ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಜಿನ ಮನೆಯಲ್ಲಿ ಕುಳಿತು ಕಲ್ಲು ತೂರುವ ಅಭ್ಯಾಸವಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ
, ನೆನಪಿನ ಶಕ್ತಿ ಕಡಿಮೆಯಾಗಿದ್ದರಿಂದ ಕಾಂಗ್ರೆಸ್-ಭಯೋತ್ಪಾದಕರ ಜೊತೆಗಿನ ಮಧುರ ಬಾಂಧವ್ಯ ಮರೆತು ಹೋಗಿದೆ! ಎಂದು ಬಿಜೆಪಿ ಟ್ವೀಟ್ ಮಾಡಿ ಗಂಭೀರ ಆರೋಪ ಮಾಡಿದೆ.

- Advertisement - 

ಕಾಶ್ಮೀರದಲ್ಲಿ ನರಮೇಧ ನಡೆಸಿದ್ದ ಭಯೋತ್ಪಾದಕ ಯಾಸಿನ್ ಮಲಿಕ್‌ನೊಂದಿಗೆ ಅಂದು ಡಾ.ಮನಮೋಹನ್ ಸಿಂಗ್ ಹಸ್ತಲಾಘವ ಮಾಡಿ, ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದು, ಯಾವ ಪಕ್ಷದವರು ಖರ್ಗೆಯವರೇ?

- Advertisement - 

ಸಿಖ್ ಹತ್ಯಾಕಾಂಡದ ರೂವಾರಿಯನ್ನು ಮೆರವಣಿಗೆ ಮಾಡಿದ್ದು, ಮುಂಬೈ ದಾಳಿಯ ಉಗ್ರನಿಗೆ ರಾಜಾತಿಥ್ಯ ನೀಡಿದ್ದು, ದೇಶದ್ರೋಹಿ ಎಸ್‌ಡಿಪಿಐ, ಪಿಎಫ್ಐ ಜೊತೆಗಿನ ನೆಂಟಸ್ತಿಕೆ ಬೆಳೆಸಿದ್ದು, ದೇಶವಿರೋಧಿಗಳ ಮೇಲಿನ ಕೇಸ್ ವಾಪಸ್ ಪಡೆದಿದ್ದು ತಮ್ಮದೇ ಪಕ್ಷವಲ್ಲವೇ

ಅತಿಯಾದ ಓಲೈಕೆ, ಹಿಂದು ವಿರೋಧಿ ನೀತಿಗಳಿಂದಲೇ ಕಾಂಗ್ರೆಸ್ ಅಧ:ಪತನ ತಲುಪಿದ್ದು ಎಂಬ ವರದಿ ನೀಡಿದ್ದು, ತಮ್ಮದೇ ಪಕ್ಷದ ಎ.ಕೆ. ಆ್ಯಂಟನಿ. ಆ ವರದಿ ಓದಿಲ್ಲವೇ? ಬಿಡುವಿದ್ದರೇ ಒಮ್ಮೆ ಓದಿ ಖರ್ಗೆಯವರೇ.!  ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

- Advertisement - 

Share This Article
error: Content is protected !!
";