“ಗೆಲುವಿನ ಗುಟ್ಟು” ವಿಶೇಷ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವಜನರಲ್ಲಿ ಆತ್ಮಸ್ಥೈರ್ಯ ಕುಂದುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ವಿಶೇಷ ಕಾರ್ಯಕ್ರಮ ಸರಣಿ ಗೆಲುವಿನ ಗುಟ್ಟುಕಾರ್ಯಕ್ರಮವು ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಪ್ರತಿ ಶುಕ್ರವಾರ ಬೆಳಿಗ್ಗೆ 9.05 ರಿಂದ 9.20 ರವರೆಗೆ ಪ್ರಸಾರವಾಗಲಿದೆ.

- Advertisement - 

ಈ ಕಾರ್ಯಕ್ರಮ ಸರಣಿಯಲ್ಲಿ ವಿವಿಧ ವಿಭಾಗದಲ್ಲಿ ನೈಪುಣ್ಯತೆ ಪಡೆಯುವ ವಿಧಾನ, ಕೌಶಲ್ಯದ ಅವಶ್ಯಕತೆ ಹಾಗೂ ಪಡೆಯುವ ವಿಧಾನ ಮತ್ತು ಜೀವನದಲ್ಲಿ ಯಶಸ್ಸನ್ನು ಪಡೆದ ಹಲವು ಗಣ್ಯರ ಯಶೋಗಾಥೆ ಪ್ರಸಾರವಾಗಲಿದ್ದು ಶಿವಮೊಗ್ಗದ ಪಿ.ಇ.ಎಸ್ ಸಂಸ್ಥೆಯ 52 ವಿಷಯ ಪರಿಣಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

- Advertisement - 

ಪಿ.ಇ.ಎಸ್ ಸಹಯೋಗದಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಸರಣಿಯನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳುವುದರೊಂದಿಗೆ ಪ್ರಯೋಜನೆ ಪಡೆಯಬೇಕೆಂದು ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಹಾಗು ಪಿ.ಇ.ಎಸ್ ಸಂಸ್ಥೆಯ ಮುಖ್ಯ ಆಡಳಿತ ಸಂಯೋಜಕ ಡಾ. ನಾಗರಾಜ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";