ವಾತ್ಸಲ್ಯ ಮನೆ ನಿರ್ಮಾಣಕ್ಕಾಗಿ ಕಾಮಗಾರಿಗೆ ಗುದ್ದಲಿ ಪೂಜೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಎಂ ಎಸ್ ಹಳ್ಳಿ ವಲಯದ ಎಂ ಎಸ್ ಹಳ್ಳಿ ಕಾರ್ಯಕ್ಷೇತ್ರದ  ವಾತ್ಸಲ್ಯ ಸದಸ್ಯರಾದ ಗಂಗಮ್ಮನವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣಕ್ಕಾಗಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು  ತಾಲೂಕಿನ ಯೋಜನಾಧಿಕಾರಿ ಶಶಿಕಲಾ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿಷ್ಣುಮೂರ್ತಿ ರಾವ್, ಜನ ಜಾಗೃತಿ ವೇದಿಕೆ ಸದಸ್ಯರು ನಗರಸಭಾ ಸದಸ್ಯ ನೇತಾಜಿ, ಪ್ರಸನ್ನ, ಶಿಬಿರದ ಉಪಾಧ್ಯಕ್ಷ ಎಂ ಎನ್ ಮೃತ್ಯುಂಜಯ, ಸಿ ಎಂ ರಮೇಶ್, ಐಟಿಐ ಪ್ರಿನ್ಸಿಪಾಲ್ ಮತ್ತು ಮದ್ಯವರ್ಜನ ಶಿಬಿರ ಉಪಾಧ್ಯಕ್ಷರು  ಉಪಸ್ಥಿತರಿದ್ದರು.

- Advertisement - 

ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ, ಮೇಸ್ತ್ರಿಈಶ್ವರ್, ಗ್ರಾಮದ ಮುಖ್ಯಸ್ಥರಾದ ಗೋವಿಂದಪ್ಪ, ರುದ್ರಪ್ಪ, ಯೋಗೀಶ್, ಭಾಗ್ಯಮ್ಮ, ಸಮನ್ವಯಾಧಿಕಾರಿ ಭವಾನಿ, ಮೇಲ್ವಿಚಾರಕಿ ನೀಲಮ್ಮ, ಸೇವಾ ಪ್ರತಿನಿಧಿ ಲಕ್ಷ್ಮಿ ಮಣಿಕಂಠ, ಗ್ರಾಮದ ಮುಖ್ಯಸ್ಥರು  ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

 

- Advertisement - 

 

 

Share This Article
error: Content is protected !!
";