ಮೇ 4 ರಿಂದ ಉಚಿತ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟ-ಯೋಗೀಶ್ ಸಹ್ಯಾದ್ರಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್
, ತರಳಬಾಳು ಜಗದ್ಗುರು ಶಾಖಾ ಮಠ, ಸಾಣೆಹಳ್ಳಿ ಹಾಗೂ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟವು ಮೇ- 4 ರಿಂದ 6 ವರೆಗೆ ಮೂರು ದಿನಗಳು ವಿವಿಧ ವೈವಿಧ್ಯಮಯ ಕಾರ್ಯಕ್ರಮ ಜರುಗಲಿದ್ದು ಅನುಭವಿ ತಜ್ಞರು ಕಮ್ಮಟದ ನೇತೃತ್ವ ವಹಿಸುತ್ತಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಮ್ಮಟದಲ್ಲಿ – ಕವನ ರಚನೆ, ಕಥೆ ಹೇಳುವುದು, ನಾಟಕ, ಚಿತ್ರಕಲೆ, ಹಸೆ ಚಿತ್ತಾರ, ಸಂಗೀತ, ಯಕ್ಷಗಾನ, ಮೂಲ ಜಾನಪದ ನೃತ್ಯ ಕಲೆಗಳ ಬಗ್ಗೆ ಉಚಿತ ತರಬೇತಿ ನೀಡಲಾಗುವುದು. ಊಟ ಹಾಗೂ ವಸತಿ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದು, ಊಟಕ್ಕೆ ತಟ್ಟೆ ಲೋಟ, ಮಲಗಲು ಜಮಖಾನ ತರಬೇಕು ಹಾಗೂ ಪ್ರಯಾಣ ಭತ್ಯೆ ನೀಡುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯ 25 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತ ಮಕ್ಕಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ವಿನಂತಿಸಿಕೊಂಡಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಲು ಇವರನ್ನ ಸಂಪರ್ಕಿಸಿ-
ಯೋಗೀಶ್ ಸಹ್ಯಾದ್ರಿ, ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, 9972240239. ಮಾರುತಿ ನಾಯ್ಕ್, ಪ್ರಧಾನ ಕಾರ್ಯದರ್ಶಿ 99863 36164. ವಿಜಯ್ ಕುಮಾರ್ ಬಿ. ಉಪಾಧ್ಯಕ್ಷರು, 96867 24546. ಹಾಲೇಶ್ ಸಿ.ಜಿ, ಸಂಘಟನಾ ಕಾರ್ಯದರ್ಶಿ 77609 32325. ಮೊದಲು ಕರೆ ಮಾಡಿದವರಿಗೆ ಆದ್ಯತೆ.

Share This Article
error: Content is protected !!
";