ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೋಲಿಕೆಗೆ ಯಾರುಂಟು ನೀವೇ ಹೇಳ್ರಪ್ಪ.
ತಾಯಿ ಚಾಮುಂಡೇಶ್ವರಿ ಮೈಸೂರಿಗೆ
ತಾಯಿ ಏಕನಾಥೇಶ್ವರಿ ದುರ್ಗಕ್ಕೆ
ನಾಡಿಗೆ ಮೈಸೂರು ಅರಸರಾದರೆ
ದುರ್ಗಕ್ಕೆ ಮದಕರಿ ನಾಯಕರು
ಕಿತ್ತೂರು ಚೆನ್ನಮ್ಮ ಬೆಳಗಾವಿಗೆ
ರಾಣಿ ಅಬ್ಬಕ್ಕ ಮಂಗಳೂರಿಗಾದರೆ
ಒನಕೆ ಓಬವ್ವ ದುರ್ಗಕ್ಕೆ
ಸಿದ್ದಗಂಗಾ ಮಠ ತುಮಕೂರಿಗೆ
ಮುರುಘಮಠ ನಮ್ಮ ದುರ್ಗಕ್ಕೆ
ಹಾಸನಕ್ಕೆ ಅನಕೃ, ಎಸ್.ಎಲ್ ಭೈರಪ್ಪ ಆದ್ರೆ
ತರಾಸು, ಬಿ.ಎಲ್ ವೇಣು ನಮ್ಮ ದುರ್ಗಕ್ಕೆ
ಶಿವಮೊಗ್ಗದ ಅಭಿವೃದ್ಧಿಗೆ ಯಡಿಯೂರಪ್ಪ
ದಾವಣಗೆರೆಯ ಬೆಳೆವಣಿಗೆಗೆ ಶಾಮನೂರು ಶಿವಶಂಕರಪ್ಪ
ಇವರ ಹೋಲಿಕೆಗೆ ನಮ್ಮ ದುರ್ಗದಲ್ಲಿ ಯಾರುಂಟು ನೀವೇ ಹೇಳ್ರಪ್ಪ.
ಕವಿತೆ:ವೆಂಕಟೇಶ ಹೆಚ್ ಚಿತ್ರದುರ್ಗ,(ನವ ದೆಹಲಿ) 7760023887.

