ಖಾಸಗಿ ವಾಹನಗಳ ಮೇಲೆ ಸರ್ಕಾರದ ಹೆಸರು, ಚಿಹ್ನೆ ಮತ್ತು ಲಾಂಛನ ದುರ್ಬಳಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪುಡಾರಿಗಳ ಕಾರುಬಾರು ಜೋರಾಗಿದೆ ಎಂದು ಜೆಡಿಎಸ್ ಹಲವು ಛಾಯಾ ಚಿತ್ರಗಳನ್ನು ಬಿಡುಗಡೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದೆ.
ಗ್ಯಾರಂಟಿ ಅನುಷ್ಠಾನ
, ಮೌಲ್ಯಮಾಪನ ಸಮಿತಿಗೆ ಕಾಂಗ್ರೆಸ್‌ಕಾರ್ಯಕರ್ತರ ಕಾನೂನು ಬಾಹಿರವಾಗಿ ನೇಮಿಸಿಕೊಂಡು, ಅವರಿಗೆ ಸಂಬಳ, ಭತ್ಯೆಗಾಗಿ ವರ್ಷಕ್ಕೆ 72 ಕೋಟಿ ರೂ. ಸರ್ಕಾರದ ಬೊಕ್ಕಸದ ಹಣ ಪೋಲು ಮಾಡಲಾಗುತ್ತಿದೆ ಎಂದು ಜೆಡಿಎಸ್ ದೂರಿದೆ.

- Advertisement - 

ಲೂಟಿಕೋರ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಭ್ರಷ್ಟಾಚಾರದ ಒಡ್ಡೋಲಗದಲ್ಲಿ ಕಾರ್ಯಕರ್ತರಿಗೆ ಬಿಟ್ಟಿ ಸಂಬಳ ನೀಡಿ ಕೊಬ್ಬಿಸಲಾಗುತ್ತಿದೆ. ಗ್ಯಾರಂಟಿ ಸಮಿತಿಗೆ ನೇಮಕವಾಗಿರುವ ಬರಗೆಟ್ಟ ಕಾಂಗ್ರೆಸ್ ಪುಡಾರಿಗಳು ಜನರಿಂದ ಆಯ್ಕೆಯಾದ ಶಾಸಕರಿಗಿಂತಲೂ ಹೆಚ್ಚು ಮೆರೆಯುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

- Advertisement - 

ಜನರ ಬೆವರಿನ ತೆರಿಗೆ ಹಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜಾತ್ರೆ ಮಾಡುತ್ತಿದ್ದಾರೆ. ವೈಯಕ್ತಿಕ ಬಳಕೆಯ ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರದ ಹೆಸರು, ಚಿಹ್ನೆ ಮತ್ತು ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಹರಿಹಾಯ್ದಿದೆ.

- Advertisement - 

ಇದು ಕ್ರಿಮಿನಲ್ ಅಪರಾಧವಾಗಿದ್ದು, ಪೊಲೀಸರು ಅನಧಿಕೃತವಾಗಿ ಸರ್ಕಾರದ ಚಿಹ್ನೆ, ಹೆಸರು, ಲಾಂಛನವನ್ನು ಬಳಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

 

Share This Article
error: Content is protected !!
";