ಮುರಿದು ಬಿದ್ದ ಹುಸ್ಕೂರು ಮದ್ದೂರಮ್ಮ ತೇರು, ಬಾಲಕಿ ಸಾವು

News Desk

ಚಂದ್ರವಳ್ಳಿ ನ್ಯೂಸ್, ಆನೇಕಲ್, ಬೆಂಗಳೂರು ಗ್ರಾಮಾಂತರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ 150 ಅಡಿ ಎತ್ತರದ ತೇರು ಬಿದ್ದು ಆರನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿ ಸಾವನ್ನಪ್ಪಿರುವ ಘಟನೆ ಜರುಗಿದೆ.

- Advertisement - 

ಮೃತ ಜ್ಯೋತಿ ತಾಯಿ ಗಂಗಮ್ಮ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಜಾತ್ರೆಯಲ್ಲಿ ಅಂಗಡಿ ಹಾಕಿದ್ದಾಗ ಜೋರು ಮಳೆ ಬಂತು. ಗೊಂಬೆಗಳನ್ನ ತುಂಬಿಕೊಂಡು ನಾನು ಬೇರೆಡೆ ಇಟ್ಟು ಬರಲು ಹೋಗಿದ್ದೆ.

- Advertisement - 

ನನ್ನ ಮಗಳು, ಆಕೆಯ ಸ್ನೇಹಿತೆ ಪಾನಿಪುರಿ ಅಂಗಡಿ ಹತ್ತಿರ ನಿಂತಿದ್ದರು. ನಾನು ಬರುವುದರ ಒಳಗೆ ತೇರು ನನ್ನ ಮಗಳ ಮೇಲೆ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೂ ನನ್ನ ಮಗಳು ಬದುಕಲಿಲ್ಲ ಎಂದು ಹೇಳಿ ಕಣ್ಣೀರು ಹಾಕಿದರು.

 

- Advertisement - 

Share This Article
error: Content is protected !!
";