ಚಂದನ್ ಅವಂಟಿ ಅವರ “ಆಲೋಚನೆಯ ದೀಪಗಳು” ಶ್ಲಾಘನೆ

News Desk

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ಶಹಾಪುರದ ವೈಷ್ಣವಿ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಗಣ್ಯ ಕವಿಗಳು ಭಾಗವಹಿಸಿ
, ಅಂಬೇಡ್ಕರ್ ರವರ ಆದರ್ಶಗಳು, ಸಮಾಜ ಪರಿವರ್ತನೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಕವಿತೆಗಳನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಚಂದನ್ ಅವಂಟಿ ಅವರು ವಾಚಿಸಿದ ಆಲೋಚನೆಯ ದೀಪಗಳುಎಂಬ ಶೀರ್ಷಿಕೆಯಲ್ಲಿರುವ ತಮ್ಮ ಕವಿತೆಯ ಮೂಲಕ ಗಮನ ಸೆಳೆದರು. ಈ ಕವನದಲ್ಲಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ನಮ್ಮ ಸಮಾಜಕ್ಕೆ ಬೆಳಕು ನೀಡುವ ದೀಪಗಳಾಗಿವೆ ಎಂಬ ಗಂಭೀರ ಅರ್ಥವನ್ನು ನುಡಿಮುತ್ತುಗಳಾಗಿ ಬಿಂಬಿಸಿದ್ದಾರೆ.

- Advertisement - 

ಅಂಬೇಡ್ಕರ್ ರಂತಹ ತತ್ವಜ್ಞರ ತತ್ವಗಳನ್ನು ನಾವೆಲ್ಲರೂ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಚಿಂತನೆಗಳೇ ನಮ್ಮನ್ನು ಮುನ್ನಡೆಸುವ ಆಲೋಚನೆಯ ದೀಪಗಳು,” ಎಂದು ಚಂದನ್ ಅವರು ಭಾವಪೂರ್ಣವಾಗಿ ಅಭಿಪ್ರಾಯಪಟ್ಟರು.

ಈ ಕವಿಗೋಷ್ಠಿಯು ಕೇವಲ ಸಾಹಿತ್ಯದ ವೇದಿಕೆಯಾಗದೇ, ಸಾಮಾಜಿಕ ಜಾಗೃತಿಗೆ ಶಕ್ತಿದಾಯಕ ಹಾದಿ ನೀಡಿದ ಉದಾಹರಣೆಯಾಯಿತು. ಭಾಗವಹಿಸಿದ ಪ್ರತಿಯೊಬ್ಬ ಕವಿಯೂ ತಮ್ಮದೇ ಆದ ಶೈಲಿಯಲ್ಲಿ ಅಂಬೇಡ್ಕರ್ ಪರಂಪರೆಯನ್ನು ಶ್ಲಾಘಿಸಿದರು.

- Advertisement - 

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಮಟ್ಟದ ಸಾಕಷ್ಟು ಸಾಹಿತ್ಯಾಭಿಮಾನಿಗಳು, ಯುವಕವಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಸಮಾರೋಪದಲ್ಲಿ ಆಯೋಜಕರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

 

Share This Article
error: Content is protected !!
";