ತೂಬಗೆರೆ ಯಲ್ಲಿ ನರಿ ಮರಿ ಪ್ರತ್ಯಕ್ಷ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ನರಿ ಮರಿಯೊಂದು ಪತ್ತೆಯಾಗಿದೆ. ಗ್ರಾಮದ ನಿವಾಸಿ ಸಾಲಿ ಮುನಿರಾಜು ರವರು ಮುಂಜಾನೆ ವಾಕಿಂಗ್ ಹೋಗುವಾಗ
, ಶ್ವಾನಗಳ ಹಿಂಡು ಈ ಪುಟ್ಟ ನರಿ ಮರಿ ಮೇಲೆ ದಾಳಿ ಮಾಡಿರುವುದನ್ನು ನೋಡಿ ಕೊಡಲೇ ಎಚ್ಚೆತ್ತುಕೊಂಡು ಅದನ್ನು ರಕ್ಷಿಸಿ ಕೋಳಿ ಮಾಂಸ ನೀಡಿ ಆರೈಕೆ ಮಾಡಿ, ಅರಣ್ಯ ಇಲಾಖೆಯವರಿಗೆ ಸುದ್ದಿ ತಿಳಿಸಿದ್ದಾರೆ.

- Advertisement - 

  ನಂತರ ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ನರಿ ಮರಿಯನ್ನು ವಶಕ್ಕೆ ಪಡೆದು ನಾಯಿಗಳಿಂದ ಹಲ್ಲೆಗೆ ಒಳಗಾದ ನರಿಯ ಮರಿಯನ್ನು ಕಾಡುಪ್ರಾಣಿಯನ್ನು ರಕ್ಷಿಸಿದ ಮುನಿರಾಜು, ಶ್ರೀಧರ, ನಾಗರಾಜು ರವರಿಗೆ ಕೃತಜ್ಞತೆ ತಿಳಿಸಿದರು.

- Advertisement - 

  ನಾಯಿಗಳಿಂದ ಹಲ್ಲೆಗೆ ಒಳಗಾದ ನರಿಯ ಮರಿಯನ್ನು ಸೂಕ್ತ ಚಿಕಿತ್ಸೆ ನೀಡುವ  ಸಲುವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳುಹಿಸಿ ಕೊಡುವುದಾಗಿ  ತಿಳಿಸಿದರು.

 

- Advertisement - 

Share This Article
error: Content is protected !!
";