ಸ್ವಾಭಿಮಾನದ ಕಿಡಿಯಾಗಿ ನಾಡಿನಲ್ಲಿ ಯಶಸ್ಸು ಸಾಧಿಸಿರುವ ಗ್ಯಾರಂಟಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಬಲೀಕರಣ, ಸಶಕ್ತೀಕರಣದ ಬುನಾದಿಯಾಗಿ ಪಂಚ ಗ್ಯಾರಂಟಿಗಳನ್ನು ಎರಡು ವರ್ಷಗಳ ಹಿಂದೆ ನಾವು ಆರಂಭಿಸಿದೆವು. ಈಗ ಅದು ಸ್ವಾಭಿಮಾನದ ಕಿಡಿಯಾಗಿ ನಾಡಿನಲ್ಲಿ ಯಶಸ್ಸು ಸಾಧಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.

- Advertisement - 

ವಾರ್ಷಿಕವಾಗಿ 52,000 ಕೋಟಿ ಅನುದಾನದಲ್ಲಿ ನಮ್ಮ ಗ್ಯಾರಂಟಿಗಳು ಕನಸುಗಳಿಗೆ ಶಕ್ತಿ ತುಂಬಿ, ಕುಟುಂಬದ ನಿರ್ವಹಣೆಗೆ ಆರ್ಥಿಕ ಬಲ ನೀಡಿದೆ. ಮಹಾತ್ಮ ಗಾಂಧಿಯವರ ಅಂತ್ಯೋದಯ ಮತ್ತು ಸರ್ವೋದಯದ ಕನಸನ್ನು ನನಸು ಮಾಡಿದ್ದೇವೆ ಎಂದು ಅವರು ತಿಳಿಸಿದರು.

- Advertisement - 

 ಸಂವಿಧಾನ ಶಿಲ್ಪಿ ಅಂಬೇಡ್ಕರರ ಆಶಯದಂತೆ, ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಕೆಲಸ ಮಾಡಿದ್ದೇವೆ. ಈ ಎರಡು ವರ್ಷಗಳು ಅಸಂಖ್ಯಾತ ಕುಟುಂಬಗಳಿಗೆ ಹರುಷ ತಂದಿದೆ, ನಮಗೆ ಸಾರ್ಥಕತೆ ತಂದಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.

 

- Advertisement - 

 

Share This Article
error: Content is protected !!
";