ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ನೂತನ ಅಧ್ಯಕ್ಷರಾಗಿ ಮಾದಾರ ಚನ್ನಯ್ಯಶ್ರೀ ನೇಮಕ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯದ ಪ್ರತಿಷ್ಠಿತ ಆಶ್ರಮಗಳಲ್ಲೊಂದಾದ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ನೂತನ ಅಧ್ಯಕ್ಷರಾಗಿ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.

- Advertisement - 

ಚಿತ್ರದುರ್ಗದಲ್ಲಿ ನಡೆದ ಮಲ್ಲಾಡಿಹಳ್ಳಿಯ ವಿಶ್ವಸ್ತ ಸಮಿತಿಯ ಸಭೆಯಲ್ಲಿ  ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆಂದು ಸಮಿತಿಯ ಕಾರ್ಯದರ್ಶಿ ಎಸ್. ಕೆ. ಬಸವರಾಜನ್ ರವರು ಘೋಷಣೆ ಮಾಡಿದ್ದಾರೆ.

- Advertisement - 

ಈ ಸಂದರ್ಭದಲ್ಲಿ ವಿಶ್ವಸ್ತ ಸಮಿತಿಯ ಉಪಾಧ್ಯಕ್ಷರು, ಆಶ್ರಮದ ಟ್ರಸ್ಟಿಗಳು, ಮುಖಂಡರು ಉಪಸ್ಥಿತರಿದ್ದರು.
ನಂತರ ಅನಾಥ ಸೇವಾಶ್ರಮದ ಹಿರಿಯ ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸುರ್ದಾಸ್ ಜಿ ರವರ ಗದ್ದುಗೆಗೆ ಪೂಜೆ ಸಲ್ಲಿಸುವ ಮುಖಾಂತರ ಆಶೀರ್ವಾದ ಪಡೆದರು.

- Advertisement - 

ಈ ಸಂದರ್ಭದಲ್ಲಿ ಅನಾಥ ಸೇವಾಶ್ರಮದ ಭಕ್ತರು, ಅಭಿಮಾನಿಗಳು, ಶಾಲಾ, ಕಾಲೇಜ್ ಗಳ ಮಕ್ಕಳು, ಮಲ್ಲಾಡಿಹಳ್ಳಿಯ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Share This Article
error: Content is protected !!
";