ಏಪ್ರಿಲ್-30 ರಂದು ಶ್ರೀಭೂತೇಶ್ವರ ಸ್ವಾಮಿಯ ಗೋಪುರದ ಕಳಸ ಪ್ರತಿಷ್ಠಾಪನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಗಳಿಕಟ್ಟೆ ಗ್ರಾಮದಲ್ಲಿ ನೆಲಸಿರುವ ಶ್ರೀ ಭೂತೇಶ್ವರ ಸ್ವಾಮಿಯ ದೇವಾಲಯದ  ಗೋಪುರದ ಕಳಸ ಪ್ರತಿಷ್ಠಾಪನೆ ಮಹೋತ್ಸವವು ಏಪ್ರಿಲ್-27ರಿಂದ ಮೇ-1ರವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

- Advertisement - 

ಏಪ್ರಿಲ್-28 ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ದಶರಥರಾಮೇಶ್ವರ ವಜ್ರದಲ್ಲಿ ಗಂಗಾ ಪೂಜೆ ನಂತರ ಯಲ್ಲದಕೆರೆಯ 101 ಲಿಂಗೇಶ್ವರ ದೇವಸ್ಥಾನದಿಂದ ಚಿಗಳಿಕಟ್ಟೆವರೆಗೂ 108 ಸುಮಂಗಲಿಯರಿಂದ ಪೂರ್ಣಕುಂಭ 5 ಕಿ.ಮೀ ಮೆರವಣಿಗೆ ಹಾಗೂ ಜನಪದ ಕಲಾ ತಂಡಗಳಿಂದ ಮೆರವಣಿಗೆ ಇರುತ್ತದೆ.

- Advertisement - 

ಏಪ್ರಿಲ್-29ರ ಮಂಗಳವಾರ ಸಕಲ ದೇವರುಗಳ ಆಗಮನ ಹಾಗೂ ಹೋಮ ಹವನ ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ.
ಅಮ್ಮಹಟ್ಟಿ ಶ್ರೀಜೋಡಿ ರಂಗನಾಥ ಸ್ವಾಮಿ, ಹೊಸಳ್ಳಿ ಶ್ರೀಆಂಜನೇಯ ಸ್ವಾಮಿ
, ಶ್ರೀ ಕಣಿವೆ ಮಾರಮ್ಮ ದೇವಿ, ಶ್ರೀ ಕಾಳಮ್ಮ ದೇವಿ, ಶ್ರೀ ಕಣಿವೆ ಮಾರಕ್ಕ ಚಿಗಳಿಕಟ್ಟೆ ದೇವರುಗಳ ಸಮಾಗಮ ನಡೆಯಲಿದೆ.

ಏ. 30ರ ಬುಧವಾರ ಬೆಳಗ್ಗೆ 6:30 ರಿಂದ ವಿವಿಧ ರೀತಿಯ ಹೋಮ ಹವನ ಪೂಜಾ ಕೈಂಕರ್ಯಗಳನ್ನು  ಹಾಗೂ ಕಳಸ ಪ್ರತಿಷ್ಠಾಪನೆ ನಡೆಸಲಾಗುವುದು ಎಂದು ಚಿಗಳಿ ಕಟ್ಟೆ ಶ್ರೀ ಭೂತೇಶ್ವರ ಸ್ವಾಮಿಯ ಸಮಿತಿಯವರು ತಿಳಿಸಿದ್ದಾರೆ.
ಏಪ್ರಿಲ್-27ರ  ಭಾನುವಾರದಿಂದ ಮೇ-01ರ ಗುರುವಾರದ ತನಕ ಐದು ದಿನಗಳ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

- Advertisement - 

ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಭೂತೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಮತ್ತು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

 

 

Share This Article
error: Content is protected !!
";