ರಾಜಕುಮಾರ್ ಸಿನಿಮಾಗಳು ಸಾಮಾಜಿಕ ನೀತಿಗೆ ಮೈಲಿಗಲ್ಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಪದ್ಮಭೂಷಣ ಡಾ ರಾಜುಕುಮಾರ್ ಅವರು ಅಭಿನಯಿಸುತ್ತಿದ್ದ ಸಿನಿಮಾಗಳ ಬಗ್ಗೆ ಕೆಲವು ವರ್ಷಗಳ ಹಿಂದೆ ವಿಮರ್ಶೆಸಿರುವ ವಿಚಾರದ ಬಗ್ಗೆ ನಾನು ನನ್ನ ವೈಶಿಷ್ಟ್ಯಗಳಲ್ಲಿ ವಿವರಿಸುತ್ತಿರುವೆ.

- Advertisement - 

ರಾಜಕುಮಾರ್ ಸಿನಿಮಾಗಳು ಕುಟುಂಬದ ಸದಸ್ಯರೊಂದಿಗೆ ನೋಡಲು ತುಂಬಾ ಚೆನ್ನಾಗಿರುತ್ತವೆ. ಸಮಾಜದ ಪರಿವರ್ತನೆಗೆ ಒಳ್ಳೆ ಪರಿಣಾಮಕಾರಿ.  ಸಾಮಾಜಿಕ ಜಾಲತಾಣಗಳ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿದ್ಯಾವಂತ ಮಕ್ಕಳು ತಂದೆ-ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ವಿಚಾರದಲ್ಲಿ ರಾಜಕುಮಾರ್ ಅವರ ಸಿನಿಮಾಗಳು ಈಗಿನ ನಾಗರಿಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ.

- Advertisement - 

ಪುನಿತ್ ರಾಜ್ ಕುಮಾರ್ ಅವರು ಅವರ ಚಿಕ್ಕವಯಸ್ಸಿನಲ್ಲಿ ರಾಜುಕುಮಾರ್ ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರವನ್ನು ಮಾಡುತ್ತಿದ್ದರು. ಆ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳನ್ನು ದೇವೇಗೌಡರು ನೋಡಿದ್ದಾರೆ. ಈ ವಿಚಾರವನ್ನು ದೇವೇಗೌಡರೇ ವಿವರಿಸಿದ್ದಾರೆ.

ಪುನೀತ್ ಅವರ ಅಭಿನಯವನ್ನು ದೇವೇಗೌಡರು ಬಹಳಷ್ಟು ಇಷ್ಟಪಟ್ಟಿದ್ದಾರೆ. ಬಳ್ಳಾರಿ ಗಣಿ ಮಾಫಿಯಾ ವಿಚಾರದಲ್ಲಿ ಪೃಥ್ವಿ ಎಂಬ ಸಿನಿಮಾದಲ್ಲಿ ಪುನೀತ್ ಅವರು ಜಿಲ್ಲಾಧಿಕಾರಿ ಪಾತ್ರ ಬಹಳಷ್ಟು ಅಚ್ಚುಕಟ್ಟಾಗಿ ಅಭಿನಯಿಸಿದರು. ಆ ಸಿನಿಮಾ ಬಿಡುಗಡೆಯಾದ ದಿನಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಪೃಥ್ವಿ ಸಿನಿಮಾ ವೀಕ್ಷಿಸಿದ ಗೌಡರು ಜಿಲ್ಲಾಧಿಕಾರಿಯ ಗಟ್ಟಿತನ ಏನೆಂದು ಪುನೀತ್ ಅವರ ಅಭಿನಯದಲ್ಲಿ ತಿಳಿದುಬಂದಿದೆ ಎಂದು ಪ್ರಶಂಸಿದರು ಈ ಸುದ್ದಿ ಆ ದಿನಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

- Advertisement - 

ದೇವೇಗೌಡರು ಒಮ್ಮೆ ಮೈಸೂರಿಗೆ ಹೋಗಿದ್ದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರ ಅಭಿನಯದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ  ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಶಿವಣ್ಣ ಹಾಗೂ ಪುನೀತ್ ಇವರಿಬ್ಬರ ಅಭಿನಯದ ಕೆಲವೊಂದು ಸಿನಿಮಾಗಳನ್ನು ಗೌಡರು ಪ್ರಶಂಶಿದ್ದಾರೆ. ಲೇಖನ-ರಘು ಗೌಡ 9916101265

Share This Article
error: Content is protected !!
";