ಸಿಲಿಕಾನ್‌ ಸಿಟಿ ಜನರಿಗೆ ಕತ್ತಲೆ ಭಾಗ್ಯ ಕರುಣಿಸಿದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಧನ ಸಚಿವ ಕೆ.ಜೆ ಜಾರ್ಜ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ
ಇದೇನಾ ನಿಮ್ಮ ಬ್ರ್ಯಾಂಡ್‌ಬೆಂಗಳೂರು ? ಎಂದು ಜೆಡಿಎಸ್ ಪ್ರಶ್ನಿಸಿದೆ.

- Advertisement - 

ಬ್ರ್ಯಾಂಡ್‌ಬೆಂಗಳೂರು ನೆಪದಲ್ಲಿ ಹಣ ಲೂಟಿ ಹೊಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಿಲಿಕಾನ್‌ಸಿಟಿ ಜನರಿಗೆ ಕತ್ತಲೆ ಭಾಗ್ಯ ನೀಡಿದೆ ಎಂದು ಜೆಡಿಎಸ್ ದೂರಿದೆ.
ಅಭಿವೃದ್ಧಿ ಮಾತು ಬಿಡಿ
, ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ತೇಪೆ ಹಾಕುವಲ್ಲಿಯೂ ವಿಫಲರಾಗಿರುವ ಉಸ್ತುವಾರಿ ಮಂತ್ರಿ ಡಿಕೆಶಿ ಅವರೇ ರಾತ್ರಿ ವೇಳೆ ಸಿಲಿಕಾನ್‌ಸಿಟಿಯನ್ನು ಕತ್ತಲಿನಲ್ಲಿ ಇಟ್ಟಿದ್ದೀರಿ.

- Advertisement - 

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳು ಸಂಪೂರ್ಣವಾಗಿ ಹಾಳಾಗಿ ಕತ್ತಲುಮಯವಾಗಿದ್ದರೂ, ಇಂಧನ ಸಚಿವ ಕೆ.ಜೆ. ಜಾರ್ಜ್‌ಅವರಿಗೆ ಕಣ್ಣಿದ್ದು ಕುರುಡರಾಗಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ಡಿಕೆಶಿ ಹಾಗೂ ಕೆ.ಜೆ.ಜಾರ್ಜ್‌ಅವರೇ ನೈಟ್‌ರೌಂಡ್ಸ್‌ಹಾಕಿ ಒಮ್ಮೆ ನಗರ ಪ್ರದಕ್ಷಿಣೆ ಮಾಡಿ ಬೀದಿ ದೀಪಗಳನ್ನು ಸರಿಪಡಿಸಿ
, ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಸಂಚರಿಸುವ ಪ್ರಯಾಣಿಕರ ಜೀವವನ್ನು ಉಳಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

 

- Advertisement - 

Share This Article
error: Content is protected !!
";