ಉದ್ಯಮಿ ಅಪಹರಣ ಪ್ರಕರಣದ ಕಿಂಗ್‌ ಪಿನ್‌ ಮಹಿಳೆ ಸೇರಿ ನಾಲ್ವರ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬೆಳಗಾವಿ ಉದ್ಯಮಿ ಬಸವರಾಜ್ ಅಂಬಿ ಅಪಹರಣ ಪ್ರಕರಣದ ಕಿಂಗ್‌ ಪಿನ್‌ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಗೋಕಾಕ್​ ತಾಲೂಕಿನ ‌ಕೊಣ್ಣೂರು ಪಟ್ಟಣದ ಮಂಜುಳಾ ‌ರಾಮನಗಟ್ಟಿ ಬಂಧಿತರು. ಘಟನೆಯ ಬಳಿಕ‌ ನಾಪತ್ತೆಯಾಗಿದ್ದ ಈಕೆ ಕಲಬುರಗಿಯಲ್ಲಿ ತಲೆಮರೆಸಿಕೊಂಡಿದ್ದರು.
ಆರಂಭದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈಗ ಮಂಜುಳಾ ‌ರಾಮನಗಟ್ಟಿ ಸೇರಿ‌ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಮಖಂಡಿಯ ಪರುಶರಾಮ ಕಾಂಬಳೆ, ಯಮಕನಮರಡಿಯ ಯಲ್ಲೇಶ ವಾಲೀಕರ ಮತ್ತಿಬ್ಬರು ಬಂಧಿತ ಆರೋಪಿಗಳು. ಈ ಮೂಲಕ ಉದ್ಯಮಿ ಅಪಹರಣ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೋಕಾಕ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಬ್ಲ್ಯಾಕ್ ಅಧ್ಯಕ್ಷೆ ಮಂಜುಳಾ ರಾಮನಗಟ್ಟಿ ತನ್ನ ಪುತ್ರ ಈಶ್ವರ ರಾಮನಗಟ್ಟಿ ಮೂಲಕ ಉದ್ಯಮಿಯನ್ನು ಅಪಹರಿಸಲಾಗಿತ್ತು. ಫೆ.20ರಂದು ದಂಡಾಪುರ ಕ್ರಾಸ್‌ ಬಳಿ ಸಿನಿಮೀಯ ‌ರೀತಿಯಲ್ಲಿ ಅಪಹರಣ ನಡೆದಿತ್ತು. ಬಳಿಕ ಆರೋಪಿಗಳು ಐದು ಕೋಟಿ ರೂ. ಹಣಕ್ಕೆ ‌ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಫೆ.18ರಂದು ಘಟಪ್ರಭಾ ಪೊಲೀಸ್​ ಠಾಣೆಯಲ್ಲಿ ಕಿಡ್ನಾಪ್ ‌ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ 24 ಗಂಟೆಯಲ್ಲಿ ಉದ್ಯಮಿಯನ್ನು ರಕ್ಷಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಮಂಜುಳಾ ರಾಮನಗಟ್ಟಿ, ಯಲ್ಲೇಶ್ ವಾಲಿಕಾರ, ಪರಶುರಾಮ‌ಕಾಂಬಳೆ ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಯಲ್ಲೇಶ ವಾಲಿಕಾರ ಪ್ರಮುಖ ಆರೋಪಿ. ಬಸವರಾಜ ಅಂಬಿಯನ್ನು ಕಿಡ್ನಾಪ್ ಮಾಡಿದ ಈಶ್ವರ ರಾಮಗನಟ್ಟಿ. ಹಣ ವಸೂಲಿ ಮಾಡೋದಕ್ಕೆ ಇವರು ಪ್ರಯತ್ನಿಸಿದ್ದಾರೆ. ಬಸವರಾಜ ಮೈಮೇಲಿನ ಆಭರಣ ದೋಚಿ ಆರೋಪಿಗಳು ಪರಾರಿ‌ಯಾಗಿದ್ದರು. ಈಶ್ವರನ ತಾಯಿ ಮಂಜುಳಾ ಪರಿಚಯವಿರೋ ಪರಶುರಾಮ ಕಾಂಬಳೆಗೆ ಕರೆ ಮಾಡಿ ನನಗೆ ಹಣ ಕೊಡಬೇಕು. ಅವನಿಗೆ ನೀನು‌‌ ಸಹಾಯ ಮಾಡಿದರೆ ನಿನಗೂ ದುಡ್ಡು ಕೊಡುವುದಾಗಿ ಮಂಜುಳಾ ಹೇಳಿದ್ದರು. ಪರಶುರಾಮ ಕಾಂಬಳೆ ನೇತೃತ್ವದಲ್ಲಿ ಐದು ಕೋಟಿ ಹಣ ಕೇಳಿರುತ್ತಾರೆ. ಇದರಲ್ಲಿ ಮಂಜುಳಾ ಪ್ರಮುಖ ಪಾತ್ರ ವಹಿಸಿದ್ದು ಅಪರಾಧಿಕ ಸಂಚಿನಡಿ ಆರೋಪಿ ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ನೌಕರಿ ಕೊಡಿಸುವುದಾಗಿ ವಂಚನೆ ಮಾಡಿದ್ದಳು. ಕುಲಗೋಡ ಪ್ರಕರಣದಲ್ಲಿ ತನಿಖೆ ಮುಂದುವರೆಯುತ್ತಿದೆ. ಪರೀಕ್ಷೆ ಇಲ್ಲದೇ ನೌಕರಿ ಕೊಡಿಸುತ್ತೇವೆ ಎಂಬ ಮಾತಿಗೆ ಮರುಳಾಗಿ ಮೋಸ ಹೋಗಬೇಡಿ ಎಂದು ಎಸ್ಪಿ ಗುಳೇದ ಕಿವಿಮಾತು ಹೇಳಿದರು.

 

Share This Article
error: Content is protected !!
";