ದೇವಾಲಯಗಳ ಸ್ವಚ್ಛತಾ ಸಮಿತಿ ಸದಸ್ಯರಿಗೆ ಗೌರವ ಪುರಸ್ಕಾರ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವಾಲಯಗಳ ಸ್ವಚ್ಛತಾ ಸಮಿತಿ ವತಿಯಿಂದ ಸುಮಾರು 75 ಕ್ಕೂ ಅಧಿಕ ಸ್ವಯಂ ಸೇವಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಲವು ದೇವಾಲಯಗಳ ಸ್ವಚ್ಛತಾ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರು  ಸುಮಾರು 30ಕ್ಕೂ ಹೆಚ್ಚು ಸ್ವಯಂ ಸೇವಕರಿಗೆ ಸೇವಾ ರತ್ನ ಪ್ರಶಸ್ತಿ ಹಾಗೂ ಸೇವಾ ಮನೋಭಾವವನ್ನು ಉತ್ತೇಜಸಿದ 45ಕ್ಕೂ ಅಧಿಕ ಪ್ರೋತ್ಸಹಕರಿಗೆ ಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

- Advertisement - 

ನಿರಂತರ ನಿಸ್ವಾರ್ಥ ಸೇವೆ ಮಾಡುತ್ತಿರುವ ಸುಂದರ ಮನಸುಗಳನ್ನು ಗುರುತಿಸಿ ಅವರ ಸೇವೆ ಹಾಗೂ ಕನಸುಗಳನ್ನ ಸಮಾಜಕ್ಕೆ ತಿಳಿಸುವ ಪ್ರಯತ್ನವಾಗಿ ನಮ್ಮ ದೇವಾಲಯಗಳ ಸ್ವಚ್ಛತಾ ಸಮಿತಿಯು ಅವರವರ ಕ್ಷೇತ್ರದ ಅನುಗುಣವಾಗಿ ಸೇವಾರತ್ನ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಗಳನ್ನು ಸೇವೆಯಾಗಿದೆ ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ನೀಡಲಾಗುತ್ತಿದ್ದು ಈ ಕಾರ್ಯಕ್ರಮಕ್ಕೆ ಪ್ರಶಸ್ತಿ ಪುರಸ್ಕೃತರು ತಮ್ಮ ಕುಟುಂಬದವರೊಡನೆ ಬಂದು ಪ್ರಶಸ್ತಿ ಸ್ವೀಕರಿಸಿರುವುದು ಸಂತಸತಂದಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ವಿವಿಧ ಕ್ಷೇತ್ರದಲ್ಲಿ  ಸಾದನೆ ಮಾಡಿರುವ ಸಾಧಕರಿಗೆ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಶಾಸಕ ದೀರಜ್ ಮುನಿರಾಜ. ಜಿಲ್ಲಾ ಕಾರ್ಯ ನಿರತ ಪತ್ರಕರ್ತ ಸಂಘ ಜಿಲ್ಲಾಧ್ಯಕ್ಷ  ಶ್ರೀನಿವಾಸ್ ಪ್ರದಾನ ಕಾರ್ಯದರ್ಶಿ  ಆರ್, ರಮೇಶ್. ಕಾರ್ಯದರ್ಶಿ ಸತೀಶ್ ,ಅಯೋಜಕ ಕೆಂಪೇಗೌಡ  ದೇವಾಲಯಗಳ ಸ್ವಚ್ಛತಾ ಸಮಿತಿ ಸದಸ್ಯರು ಹಾಜರಿದ್ದರು.

- Advertisement - 

 

 

Share This Article
error: Content is protected !!
";