ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಮ್ಮ ಹಳ್ಳಿ ಥಿಯೇಟರ್ ನೀಡುವ 2025-26 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದ್ದು ರಂಗಭೂಮಿಯ ಸಾಧನೆಗಾಗಿ ಖ್ಯಾತ ರಂಗಕರ್ಮಿ ಡಾ.ಬೇಲೂರು ರಘುನಂದನ್ ಹಾಗೂ ಸಮಾಜಸೇವೆಗಾಗಿ ಶ್ರೀಮತಿ ರೇಖಾ ಜಿ.ಎಂ ರವರಿಗೆ ಈ ಬಾರಿಯ ಪ್ರಶಸ್ತಿ ಪ್ರಕಟವಾಗಿದೆ ಎಂದು ನಮ್ಮ ಹಳ್ಳಿ ಥಿಯೇಟರ್ ತಂಡದ ಅಧ್ಯಕ್ಷರಾದ ಚೇತನ್.ಸಿ ತಿಳಿಸಿದ್ದಾರೆ.
ಪ್ರಶಸ್ತಿಯು ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು ಸನ್ಮಾನ ಕಾರ್ಯಕ್ರಮವನ್ನು ಏಪ್ರಿಲ್ 27 ರಂದು ಕರ್ನಾಟಕ ಸಂಘದಲ್ಲಿ ನಡೆಯುವ ಮನಃಸ್ಫೂರ್ತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು.

ಈ ಮೊದಲು ಈ ಪ್ರಶಸ್ತಿಗೆ ಪದ್ಮಶ್ರೀ ಹಾಜಬ್ಬ, ಡಾ.ವಿ.ಎಲ್.ಎಸ್.ಕುಮಾರ್, ಡಾ.ರಜನಿ.ಎ.ಪೈ, ಮಾಲತಿ.ಎಸ್, ಸಂದೇಶ್ ಜವಳಿ, ಪುರುಷೋತ್ತಮ ತಲವಾಟ, ಸೇತುರಾಂ, ಗಣೇಶ್ ಮಾಸ್ಟರ್, ಡಾ.ಸಂಧ್ಯಾ ಕಾವೇರಿ .ಡಾ.ಗಜಾನನ ಶರ್ಮಾ, ದಾಕ್ಷಾಯಿಣಿ ಭಟ್, ಜನಾರ್ಧನ್ ರವರು ಭಾಜನರಾಗಿದ್ದರು.

