ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನಡೆದಿರುವ ಗೋಹತ್ಯೆ ಪ್ರಕರಣಗಳನ್ನು ಗಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಗೋಹತ್ಯೆ ತಡೆಯಲು ಏನಾದರೂ ಉಪಾಯ ಕಂಡು ಹಿಡಿಯಬೇಕಿದೆ. ಇಂತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಮನಸ್ಥಿತಿ ಇರುವವರನ್ನು ಗುರುತಿಸಬೇಕು. ಈ ಪ್ರಕರಣಗಳ ಹಿಂದೆ ಯಾವುದಾದರೂ ಸಂಘಟನೆ ಇದ್ಯಾ, ಇಂಡುವಿಶ್ಯುಲ್ ಇದ್ದಾರಾ ಪರಿಶೀಲನೆ ಮಾಡಬೇಕು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಈ ಕುರಿತಂತೆ ಸೂಚನೆ ನೀಡಿರುವೆ ಎಂದು ಅವರು ತಿಳಿಸಿದರು.
ಮೈಕ್ರೋ ಫೈನಾನ್ಸ್ ಗಳ ದೌರ್ಜನ್ಯ, ಕಿರುಕುಳ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಹಣಕಾಸು ಇಲಾಖೆ ಇದಕ್ಕೆ ದಾರಿ ಹುಡುಕಬೇಕು. ಪೊಲೀಸ್ ಇದನ್ನು ಮಾಡುವುದಕ್ಕೆ ಬರಲ್ಲ. ಇನ್ನು ಬೀದರ್, ಮಂಗಳೂರು ದರೋಡೆ ಪ್ರಕರಣದ ಮಾಹಿತಿ ಕಲೆಹಾಕಲಾಗಿದೆ. ಶೀಘ್ರವಾಗಿ ಸೆಕ್ಯೂರ್ ಮಾಡುತ್ತೇವೆ. ಅವರು ಬೇರೆ ರಾಜ್ಯದವರು ಅಂತ ಮಾಹಿತಿ ಇದೆ ಎಂದು ಪರಮೇಶ್ವರ್ ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಸಭಾಪತಿ ಅವರು ಬದಲಾವಣೆ ಮಾಡಬೇಕು ಎನ್ನುವುದು ಯಾವ ಹಂತದಲ್ಲಿ ಚರ್ಚೆಯಾಗಿದೆ ಗೊತ್ತಿಲ್ಲ. ಬಿಜೆಪಿ ನಮಗೆ ಒಡೆದ ಮನೆ ಅಂತಿದ್ರು. ಅವರ ಮನೆಗೆ ಎಷ್ಟು ಬಾಗಿಲು ಹೇಳಬೇಕಲ್ಲ?. ನಮಗೆ ಹೇಳ್ತಿದ್ರಲ್ವಾ?. ಈಗ ಏನು ಮಾಡ್ತೀರಾ ಅಂತ ಕೇಳ್ತೇನೆ ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಕಾರಾಗೃಹದ ವಿಭಜನೆ ಕುರಿತು ಮಾತನಾಡಿ, ಕೇಂದ್ರ ಕಾರಾಗೃಹದ ಭದ್ರತೆ ಮತ್ತಷ್ಟು ಹೆಚ್ಚಬೇಕು. ಜೈಲ್ ಸಿಬ್ಬಂದಿ ನೇಮಕವಾಗಬೇಕು. ಜೈಲ್ ಡಿವೈಡ್ ಸದ್ಯಕ್ಕೆ ಪ್ರಪೋಸಲ್ ನಮ್ಮ ಮುಂದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.