ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಥ ಸಪ್ತಮಿ ಹಿನ್ನೆಲೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದ ಸುಭಾಷ್ ನಗರದಲ್ಲಿರುವ ಪತಂಜಲಿ ಯೋಗ ಶಿಕ್ಷಣ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿತ್ತು.

- Advertisement - 

ಯೋಗ ಗುರುಗಳಾದ ಮಂಜುನಾಥ್ ರವರ ಮಾರ್ಗ ದರ್ಶನದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಜೊತೆಗೆ ಅಗ್ನಿಹೋತ್ರ ಹೋಮ ನಡೆಸಿ ರಥ ಸಪ್ತಮಿ ಆಚರಣೆ ಮಾಡಲಾಯಿತು. ನೂರ ಒಂದು ಬಾರಿ ಯೋಗ ಮಾಡುವ ಮೂಲಕ ಸೂರ್ಯ ನಮಸ್ಕಾರ ಮಾಡಲಾಯಿತು.

- Advertisement - 

ರಥಸಪ್ತಮಿ ಯಂದು ಸೂರ್ಯ ನಮಸ್ಕಾರ ಮಾಡಿದರೆ ಸಾಕಷ್ಟು ನಕಾರಾತ್ಮಕ ಶಕ್ತಿಗಳು ತೊಲಗಿ ಆರೋಗ್ಯ ಲಭಿಸುತ್ತದೆ ಎನ್ನುವ ಪ್ರತೀತಿ ಹಿನ್ನೆಲೆ ನೂರಾರು ಮಂದಿ ಯೋಗ ಪಟುಗಳು ಭಾಗಿಯಾಗಿ ಸೂರ್ಯ ನಮಸ್ಕಾರ ಮಾಡಿದರು.

ಸೂರ್ಯ ದೇವನ ಜನ್ಮ ದಿನಾಚರಣೆಯು ಸಹ ರಥ ಸಪ್ತಮಿಯಂದೆ ಇದೆ. ಈ ಹಿನ್ನೆಲೆ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.

- Advertisement - 

Share This Article
error: Content is protected !!
";