Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಂಡಾಯ ಸಾಹಿತ್ಯ ಸಂಘಟನೆಗೆ 47ರ ಸಂಭ್ರಮ: ‘ಹೊಸ ತಲೆಮಾರು’ ಅಭಿಯಾನಕ್ಕೆ ಚಾಲನೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಸಾಹಿತ್ಯ ಲೋಕದಲ್ಲಿ ಸಾಂಸ್ಕ
øತಿಕ ಮತ್ತು ಸಾಮಾಜಿಕ ಮನ್ವಂತರಕ್ಕೆ ಕಾರಣವಾದ ಬಂಡಾಯ ಸಾಹಿತ್ಯ ಸಂಘಟನೆಯು ಆರಂಭವಾಗಿ ಯಶಸ್ವಿಯಾಗಿ 47 ವರ್ಷಗಳನ್ನು ಪೂರೈಸಿದೆ. ಈ ಮಹತ್ವದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯುವ ಪೀಳಿಗೆಯನ್ನು ಸೃಜನಶೀಲತೆಯೆಡೆಗೆ ಪ್ರೇರೇಪಿಸಲು ಮತ್ತು ಪ್ರಗತಿಪರ ವಿಚಾರಧಾರೆಗಳನ್ನು ಬಿತ್ತಲು ಬಂಡಾಯ ಸಾಹಿತ್ಯ ಸಂಘಟನೆಯು ಸಜ್ಜಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಸಂಚಾಲಕರಾದ ಡಾ. ಜೆ. ಕರಿಯಪ್ಪ ಮಾಳಿಗೆ ತಿಳಿಸಿದ್ದಾರೆ.

ಬಂಡಾಯ ಸಾಹಿತ್ಯ ಸಂಘಟನೆಯು 1979 ರಿಂದ ಎಡ ಮತ್ತು ಪ್ರಜಾಸತ್ತಾತ್ಮಕ ಪ್ರಗತಿಪರ ವಿಚಾರಧಾರೆಯ ಎಲ್ಲರನ್ನೂ ಒಳಗೊಂಡ ಚಳವಳಿಯ ಸಂಗಾತಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಸಾಹಿತ್ಯಕ, ಸಾಂಸ್ಕøತಿಕ, ಸಾಮಾಜಿಕ ನೆಲೆಯ ಪ್ರಗತಿಪರ ವಿಚಾರಧಾರೆಗಳನ್ನು ವಿಚಾರ ಸಂಕಿರಣ, ಕಾರ್ಯಗಾರ ಮುಂತಾದ ಕಾರ್ಯಕ್ರಮಗಳ ಮೂಲಕ ಬಿತ್ತರಿಸುತ್ತಾ ಸಾಗಿದೆ. ಎಲ್ಲ ಜನಪರ ಚಳವಳಿಗಳಿಗೂ ಬೆಂಬಲ ಸೂಚಿಸಿ, ಭಾಗವಹಿಸಿ, ಪ್ರಗತಿಪರ ಪರಂಪರೆಯ ಪ್ರಜ್ಞೆ ಮತ್ತು ಸಮಕಾಲೀನ ಪ್ರಜ್ಞೆ ಬೆಳೆಸುತ್ತ, ಜಾತಿವಾದ, ಧಾರ್ಮಿಕ, ಮೂಲಭೂತವಾದ, ಲಿಂಗ ತಾರತಮ್ಯಗಳ ವಿರುದ್ಧ ದನಿಯೆತ್ತಿದೆ. ಆಗಾಗ್ಗೆ ಏಳು-ಬೀಳುಗಳನ್ನು ಅನುಭವಿಸಿದರೂ ಈಗಲೂ ಉಳಿದುಕೊಂಡಿದೆ. ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕ್ರಿಯಾಶೀಲವಾಗಿದೆ.

ಚಿತ್ರದುರ್ಗ ಜಿಲ್ಲೆಯು ಸಾಂಸ್ಕøತಿಕ ಹಾಗೂ ಸಾಮಾಜಿಕ ಹೋರಾಟಗಳ ಫಲವತ್ತಾದ ಭೂಮಿಯಾಗಿದ್ದು, ಬಂಡಾಯ ಸಾಹಿತ್ಯ ಸಂಘಟನೆಯ ಚರಿತ್ರೆಯಲ್ಲಿ ಜಿಲ್ಲೆಯ ಚಟುವಟಿಕೆಗಳು ಸದಾ ಮೈಲಿಗಲ್ಲಾಗಿ ಉಳಿದಿವೆ. ಕಳೆದ ದಶಕಗಳಲ್ಲಿ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲಾ ಘಟಕವು ಪ್ರಬಲ ಸಾಂಸ್ಕøತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಪ್ರಮುಖ ಸಾಕ್ಷಿ ಎಂಬಂತೆ, 2010 ರಲ್ಲಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಜನಶಕ್ತಿ ಸಮಾವೇಶವು ಇತಿಹಾಸ ಸೃಷ್ಟಿಸಿತ್ತು. ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ರಾಜ್ಯದ ಮೂರು ತಲೆಮಾರಿನ ಬಂಡಾಯ ಸಾಹಿತಿಗಳು, ಪ್ರಗತಿಪರ ಚಿಂತಕರು ಹಾಗೂ ಸೃಜನಶೀಲ ಮನಸ್ಸುಗಳು ಒಂದೆಡೆ ಸೇರಿ ಗಂಭೀರ ಚಿಂತನೆ ನಡೆಸಲಾಗಿತ್ತು.

ಅದೇ ಹಾದಿಯಲ್ಲಿ, 2018 ರಲ್ಲಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರ ಮಟ್ಟದ ಬಂಡಾಯ ಸಾಹಿತ್ಯ ಗೋಷ್ಠಿಯು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತ್ತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 250 ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಎರಡು ದಿನಗಳ ಕಾಲ ನಡೆದ ಈ ಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸುಮಾರು 2,000 ಕ್ಕೂ ಹೆಚ್ಚು ಯುವಕರು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಿದ್ದ ಈ ಸಮಾವೇಶದಲ್ಲಿ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಮನೋಧರ್ಮಎಂಬ ವಿಷಯದ ಕುರಿತು ಆಳವಾದ ಚರ್ಚೆಗಳು ನಡೆದಿದ್ದವು. ಈ ಕಾರ್ಯಕ್ರಮವು ಮುಖ್ಯವಾಗಿ ಸಂವಾದ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿತ್ತು.

ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವುದು ಮತ್ತು ಅವರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಯುವಕರಿಗೆ ಬಂಡಾಯದ ಮತ್ತು ಸಾಹಿತ್ಯಿಕ ಸಂಘಟನೆಯ ನಿಜವಾದ ಮನೋಧರ್ಮ ಪರಿಚಯಿಸಲು ಸಂಘಟನೆ ಸಜ್ಜಾಗಿದೆ. ಇದಕ್ಕಾಗಿ ಪ್ರಭುತ್ವ ಮತ್ತು ಸೃಜನಶೀಲತೆಎಂಬ ಪ್ರಮುಖ ವಿಷಯದ ಅಡಿಯಲ್ಲಿ ಒಂದು ದಿನದ ವಿಶೇಷ ವಿಚಾರಗೋಷ್ಠಿಯ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

 

 ಈ ವಿಶೇಷ ವಿಚಾರಗೋಷ್ಠಿಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅವರೇ ನೇರವಾಗಿ ಪ್ರಚಲಿತ ವಿದ್ಯಮಾನಗಳ ಕುರಿತು ವಿಷಯ ಮಂಡಿಸಲಿದ್ದಾರೆ. ಇದರೊಂದಿಗೆ ಯುವ ಮನಸ್ಸುಗಳನ್ನು  ಪ್ರೋತ್ಸಾಹಿಸಲು ವಿಶೇಷ ಕವಿಗೋಷ್ಠಿ ಹಾಗೂ ಮುಕ್ತ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ದಿಕ್ಸೂಚಿ ಹಾಗೂ ಮಾರ್ಗದರ್ಶನದೊಂದಿಗೆ, ಸ್ಥಳೀಯ ಬಂಡಾಯ ಮನಸ್ಸುಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಾಹಿತ್ಯ ಆಸಕ್ತರು, ಯುವಕರು ಮತ್ತು ಪ್ರಗತಿಪರ ಚಿಂತಕರು ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಡಾ. ಜೆ. ಕರಿಯಪ್ಪ ಮಾಳಿಗೆ ಕೋರಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಆಸ್ಪತ್ರೆಯಲ್ಲಿ 'ಕಮಿಷನ್ ದಂಧೆ': ಭ್ರಷ್ಟ ವೈದ್ಯರ ಅಮಾನತಿಗೆ ಆಗ್ರಹ​‘ಬಿಡದಿ ಟೌನ್‌ಶಿಪ್’ ವಿರುದ್ಧ ಎಚ್‌ಡಿಕೆ ಗುಡುಗು: 2007ರ ಕಲಾಪದ ದಾಖಲೆ ಬಿಡುಗಡೆಗೆ ಸಿದ್ಧತೆ!ಬಿಡದಿ ಟೌನ್‌ಶಿಪ್ ಭೂಸ್ವಾಧೀನ: 90% ರೈತರ ವಿರೋಧ ಮುಚ್ಚಿಟ್ಟು ಕೇವಲ 7 ಜನಕ್ಕೆ ಪರಿಹಾರ ವಿತರಣೆ – ಎಚ್.ಡಿ. ಕುಮಾರಸ್ವಾಮಿ ಆರೋಪಜೆಡಿಎಸ್ ಗಂಭೀರ ಆರೋಪ: ರಾಜ್ಯದಲ್ಲಿ ಬಿತ್ತನೆ ಕುಂಠಿತ, ಬರ ಪರಿಹಾರಕ್ಕೆ ಆಗ್ರಹಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಹೊಸ "ಪ್ರಜಾಸೇವೆ ಇಲಾಖೆ" ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್ಕರ್ನಾಟಕ ಕೈಗಾರಿಕಾ ರಂಗದಲ್ಲಿ ಐತಿಹಾಸಿಕ ಮೈಲಿಗಲ್ಲು: 28 ಸಾವಿರ ಉದ್ಯೋಗ ಸೃಷ್ಟಿ!ಜಾಗತಿಕ ಕನ್ನಡಿಗರ ನಿಯೋಗದೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಭೆ: ಸೌಹಾರ್ದಯುತ ಸಹಕಾರಕ್ಕೆ ಭರವಸೆಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಿ: ದೇಶದ ಜನತೆಗೆ ಹೆಚ್.ಡಿ. ಕುಮಾರಸ್ವಾಮಿ ಕರೆಪೊಲೀಸ್ ಇಲಾಖೆಯ ಮಾನ ಹರಾಜು: ಗೃಹ ಸಚಿವರ ರಾಜೀನಾಮೆಗೆ ಆರ್. ಅಶೋಕ್ ಆಗ್ರಹಅಡ್ಡಮತದಾನ ರಾಜಕೀಯದಲ್ಲಿ ಆಡಳಿತ ಮೂಲೆಗೆ: ಆರ್. ಅಶೋಕ್ ​