Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆಚ್‌ಎಂಟಿ ಸಂಸ್ಥೆಗೆ 1960ರಲ್ಲೇ ಕಾನೂನು ಬದ್ಧವಾಗಿ ಜಮೀನು ಪಡೆಯಲಾಗಿದೆ - ಕುಮಾರಸ್ವಾಮಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 
ಹೆಚ್‌ಎಂಟಿ ಸಂಸ್ಥೆಗೆ ಸೇರಿದ ಭೂಮಿಯ ವಿಚಾರವಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಅರಣ್ಯ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

1960ರಲ್ಲೇ ಕಾನೂನುಬದ್ಧವಾಗಿ ಪ್ರಕ್ರಿಯೆ ಮುಗಿದಿರುವ ಭೂಮಿಯನ್ನು "ಒತ್ತುವರಿ" ಎಂದು ಬಿಂಬಿಸುತ್ತಿರುವ ಅರಣ್ಯ ಸಚಿವರ ರಾಜಕೀಯ ನಾಟಕ ಈಗ ಬಯಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

​ಈ ಕುರಿತು ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಸಚಿವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​​ಕಾನೂನುಬದ್ಧ ಹಸ್ತಾಂತರ: 1960ರಲ್ಲೇ ಕಾನೂನುಬದ್ಧವಾಗಿ 'ಡೀಫಾರೆಸ್ಟ್' (ಅರಣ್ಯ ಮುಕ್ತ) ಪ್ರಕ್ರಿಯೆ ನಡೆಸಿ, ಅರಣ್ಯ ಸಂರಕ್ಷಣಾಧಿಕಾರಿ ಅವರಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡೇ ಈ ಭೂಮಿಯನ್ನು HMT ಸಂಸ್ಥೆಗೆ ನೀಡಲಾಗಿದೆ.

​ದಾಖಲೆಗಳ ಬಿಡುಗಡೆ: 1960ರ ನವೆಂಬರ್ 25 ರಂದು ಹೆಚ್‌ಎಂಟಿ ಸಂಸ್ಥೆಯೊಂದಿಗೆ ನಡೆದ ಒಪ್ಪಂದಕ್ಕೆ ಸಂಬಂಧಿಸಿದ ಅಧಿಕೃತ ಸರ್ಕಾರಿ ಆದೇಶದ ದಾಖಲೆಗಳನ್ನು ಕುಮಾರಸ್ವಾಮಿ ಅವರು ಬಹಿರಂಗಪಡಿಸಿದ್ದಾರೆ.

​ಸಚಿವರಿಗೆ ಸವಾಲು: "ಆರೋಪ ಮಾಡುವ ಮುನ್ನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ, ಆಧಾರಸಹಿತ ಮಾತನಾಡಿ ಸಚಿವರೇ," ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಅರಣ್ಯ ಸಚಿವರಿಗೆ ನೇರ ಸವಾಲು ಹಾಕಿದ್ದಾರೆ.

​"1960ರಲ್ಲೇ ಕಾನೂನುಬದ್ಧವಾಗಿ 'ಡೀಫಾರೆಸ್ಟ್' ಮಾಡಿ, ಡಿಎಫ್‌ಒ ಅವರಿಂದ NOC ಪಡೆದು HMT ಸಂಸ್ಥೆಗೆ ನೀಡಲಾದ ಭೂಮಿಯನ್ನು 'ಒತ್ತುವರಿ' ಎಂದು ಬಿಂಬಿಸುತ್ತಿರುವ ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ರಾಜಕೀಯ ನಾಟಕ ಬಯಲಾಗಿದೆ."
ಎಚ್.ಡಿ. ಕುಮಾರಸ್ವಾಮಿ
, ಕೇಂದ್ರ ಸಚಿವರು.

​ಹೆಚ್‌ಎಂಟಿ ಭೂಮಿ ವಿವಾದದ ಸುತ್ತ ಕಳೆದ ಕೆಲವು ದಿನಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಇದೀಗ ಕೇಂದ್ರ ಸಚಿವರು ಬಿಡುಗಡೆ ಮಾಡಿರುವ 1960ರ ದಶಕದ ಸರ್ಕಾರಿ ದಾಖಲೆಗಳು ಈ ರಾಜಕೀಯ ಜಟಾಟಿಗೆ ಹೊಸ ತಿರುವು ನೀಡಿವೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.