Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ-1ರಿಂದ ಮಾಯಸಂದ್ರ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ

Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಾಯಸಂದ್ರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವವು ದಿನಾಂಕ 01-05-2026 ರಿಂದ 08-05-2026ರವರೆಗೆ ಅತ್ಯಂತ ಸಡಗರ-ಸಂಭ್ರಮದಿಂದ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ. 

​ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳು:
​ಜಾತ್ರೆಯ ಅಂಗವಾಗಿ ವಾರದ ಕಾಲ ವಿವಿಧ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ಜರುಗಲಿವೆ.

​ಮೇ 1 (ಶುಕ್ರವಾರ): ಮದಲಿಂಗಿತ್ತಿ ಶಾಸ್ತ್ರ ಮತ್ತು ಕಂಕಣ ಕಟ್ಟುವುದು. 
​ಮೇ 2 (ಶನಿವಾರ): ಜಲ್ಲಿ ಪೂಜೆ
, ಅಮ್ಮನವರ ಮೆರವಣಿಗೆ ಹಾಗೂ ದೊಡ್ಡ ಪೂಜೆ.​ಮೇ 3 (ಭಾನುವಾರ): ಗ್ರಾಮಸ್ಥರಿಂದ ಆರತಿ, ಬಾನ ಮತ್ತು ಬೇವಿ ಉಡಿಕೆ ಸೇವೆ. ಬೆಳಿಗ್ಗೆ 9-00 ಗಂಟೆಗೆ ದಾಸೋಹ ಭವನ ಉದ್ಘಾಟನೆ ನೆರವೇರಲಿದೆ. 

​ಮೇ 4 (ಸೋಮವಾರ): ಮೇಟಿಕುರ್ಕೆ ಎ.ಕೆ. ಕಾಲೋನಿ ಗ್ರಾಮಸ್ಥರಿಂದ ಅಮ್ಮನವರ ಸಿಡಿ ಉತ್ಸವ. ಬೆಳಿಗ್ಗೆ 10-00ಕ್ಕೆ ಗೋಪುರ ಕಳಸ ಸ್ಥಾಪನೆಯ ವರ್ಷದ ಪೂಜೆ. 
​ಮೇ 5 (ಮಂಗಳವಾರ): ಭಕ್ತಾದಿಗಳಿಂದ ಆರತಿ ಮತ್ತು ಮುಡಿ ಸೇವೆ. 

​ಮೇ 6 (ಬುಧವಾರ): ಬೆಳಗಿನ ಜಾವ 4 ಗಂಟೆಗೆ 101 ಎಡೆ ಪೂಜೆ, ಬೆಳಿಗ್ಗೆ 7 ಗಂಟೆಗೆ ನಂಜಯ್ಯನಕೊಟ್ಟಿಗೆ ಗ್ರಾಮಸ್ಥರಿಂದ "ಗಾವು" ಸೇವೆ ಮತ್ತು 8-30 ರಿಂದ ಗ್ರಾಮ ಪ್ರವೇಶ. 
​ಮೇ 8 (ಶುಕ್ರವಾರ): ದೊಡ್ಡ ಪೂಜೆ
, ಚಪ್ಪರ ಇಳಿಸುವುದು ಮತ್ತು ಕಂಕಣ ಬಿಚ್ಚುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. 

​ವಿಶೇಷ ಸೂಚನೆಗಳು:
​ಮುಡಿ ಸೇವೆ: ಮುಡಿ (ಮಂಡೆ) ತೆಗೆಸುವ ಭಕ್ತರು 201-00 ರೂಪಾಯಿಗಳನ್ನು ಪಾವತಿಸಿ ರಸೀದಿ ಪಡೆಯತಕ್ಕದ್ದು. 
​ಅನ್ನದಾಸೋಹ: ಜಾತ್ರೆಯ ಎಲ್ಲಾ ದಿನಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇರಲಿದ್ದು
, ದಾನಿಗಳು ಅಕ್ಕಿ, ಬೇಳೆ, ಬೆಲ್ಲದ ರೂಪದಲ್ಲಿ ಸಹಾಯ ಮಾಡಬಹುದಾಗಿದೆ. ಅಲ್ಲದೆ ಪ್ರತಿ ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ಅನ್ನದಾಸೋಹ ನಡೆಯಲಿದೆ. 

​ಸಹಾಯ: ದೇವಾಲಯದ ಜೀರ್ಣೋದ್ದಾರಕ್ಕಾಗಿ ಭಕ್ತರು ತನು-ಮನ-ಧನದಿಂದ ಸಹಕರಿಸಲು ಕೋರಿದ್ದಾರೆ. 
​ ಶ್ರೀ ಕರಿಯಮ್ಮದೇವಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ
, ಮಾಯಸಂದ್ರ ಹಾಗೂ ಶಿಡ್ಲಯ್ಯನಹಟ್ಟಿ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಮನವಿ ಮಾಡಿದ್ದಾರೆ.

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್. ಜೆ. ಸಿ. ಎಸ್ ಪ್ರೌಢಶಾಲೆಗೆ ಶೇ. ನೂರು ಫಲಿತಾಂಶಟ್ರಾಕ್ಟರ್ ಬೈಕ್ ಡಿಕ್ಕಿ ಬೈಕ್ ಸವಾರರ ಸಾವುಬಡಪ್ಪನಕಟ್ಟೆ  ಕಥೆ ಭಾಗ-5: ಕುಮಾರ್ ಬಡಪ್ಪಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆ; ನಾಯಕತ್ವ ಬದಲಾವಣೆಗೆ ಶಿವಕುಮಾರ್ ಮಾರ್ಮಿಕ ನುಡಿಶೃಂಗೇರಿ ಅಂಚೆ ಮತಗಳ ಮರು ಎಣಿಕೆ: ಮೇ 2ಕ್ಕೆ ಹೈಕೋರ್ಟ್ ಆದೇಶದಂತೆ ಪ್ರಕ್ರಿಯೆ ಆರಂಭಟಿಸಿಎಸ್ ವರ್ಲ್ಡ್ 10K ಮ್ಯಾರಥಾನ್: ದಾಖಲೆ ಬರೆದ ಕ್ವಿಜೆರಾ; ಸಂಜೀವನಿ ಜಾಧವ್‌ಗೆ ಹ್ಯಾಟ್ರಿಕ್ ಸಾಧನೆಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ: ಡಿಸಿಎಂ ಶಿವಕುಮಾರ್ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ3ನೇ ಬಾರಿಯೂ ತಪ್ಪಿದ ವಿಮಾನದ ಸಕಾಲಿಕ ಲ್ಯಾಂಡಿಂಗ್; ಆಕಾಶದಲ್ಲೇ 40 ನಿಮಿಷ ಸುತ್ತಾಡಿದ ಪ್ರಯಾಣಿಕರು!ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90.47 ಫಲಿತಾಂಶ: ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ