ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧೀಕ್ಷಕರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಜು.೧೦ ಸ್ಕೀಮ್ ನೌಕರರ ಕರಾಳ ದಿನಾಚರಣೆ ಪ್ರಯುಕ್ತ ಒಂದು ದಿನದ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮನವಿ ಅರ್ಪಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ
ಎಲ್ಕೆಜಿ. ಯುಕೆಜಿ. ವಿಸ್ತರಣೆಯಾಗಬೇಕು. ೨೦೨೬ ರ ಮಾ-೨೪ ರ ಸಭೆಯ ತೀರ್ಮಾನದಂತೆ ಹತ್ತು ಸಾವಿರ ಕೇಂದ್ರಗಳಲ್ಲಿ ಎಲ್ಕೆಜಿ. ಯುಕೆಜಿ. ಆರಂಭಿಸಲು ಅನುದಾನ ನೀಡಬೇಕು. ಮೂರರಿಂದ ಆರು ವರ್ಷದ ಮಕ್ಕಳಿಗೆ ಆರಂಭಿಕ ಬಾಲ್ಯ ಆರೈಕೆ, ಶಿಕ್ಷಣ ಮತ್ತು ಅಭಿವೃದ್ದಿ ಹಕ್ಕನ್ನು ಕಾನೂನಿನ ಮೂಲಕ ಖಾತ್ರಿಗೊಳಿಸಿ ೨೦೧೧ ರಿಂದ ನಿವೃತ್ತಿಯಾದವರಿಗೆ ಗ್ರಾಚ್ಯುಟಿ ನೀಡಬೇಕು. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಎಲ್ಲಾ ಅಂಗನವಾಡಿಗಳನ್ನು ಅಂಗನವಾಡಿ ಕಮ್-ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು.
ಅಂಗನವಾಡಿ ನೌಕರರನ್ನು ಬಿಎಲ್ಓ. ಎಸ್ಐಆರ್. ಇತರೆ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸಬೇಕು. ಐವತ್ತು ವರ್ಷ ಮೇಲ್ಪಟ್ಟವರನ್ನು ಸಹಾಯಕಿ ಇಲ್ಲದಿದ್ದರೆ ಎಲ್ಕೆಜಿ. ಯುಕೆಜಿ.ಗೆ ಆಯ್ಕೆಯಾದ, ತೀವ್ರ ಕಾಯಿಲೆ ಇರುವವರನ್ನು ಬಿಎಲ್ಓ. ದಿಂದ ಬಿಡುಗಡೆಗೊಳಿಸಿ ಇಲಾಖೇತರ ಬೇರೆ ಕೆಲಸಗಳಿಗೆ ನೇಮಿಸಬಾರದೆಂದು ಒತ್ತಾಯಿಸಿದರು.
ಸಿಐಟಿಯು. ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್ಪೀರ್, ಇಂದಿರಮ್ಮ, ಬಿ.ಬೋರಮ್ಮ, ಅನುಸೂಯಮ್ಮ, ನಿರ್ಮಲಮ್ಮ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.



